ಕಾಸರಗೋಡು: ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಭೇಟಿಯಾಗಿ ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಲು ಮನವಿ ಸಲ್ಲಿಸಿ ತುರ್ತು ಕ್ರಮಕ್ಕೆ ಒತ್ತಾಯಿಸಿದೆ.
ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ ಮಲಯಾಳಂ ಭಾಷಾ ಬಿಲ್-2025 ಎಂಬ ಕರಡನ್ನು ಅಂಗೀಕರಿಸಿದೆ. ಈಗಾಗಲೇ ಇಂತಹ ಬಿಲ್ಲನ್ನು 2017 ರಲ್ಲಿ ಭಾರತದ ಮಾನ್ಯ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿ ವಾಸಿಸುತ್ತಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಭಾರತ ಸರ್ಕಾರದ ಅಲ್ಪಸಂಖ್ಯಾತ ಸಚಿವಾಲಯ ಕೇರಳ ಸರ್ಕಾರಕ್ಕೆ ಹಲವಾರು ಬಾರಿ ಕೇರಳದ ಭಾಷಾ ಅಲ್ಪಸಂಖ್ಯಾತರ ಹಿತಗಳ ರಕ್ಷಣೆ ಮಾಡಬೇಕೆಂದು ಹಲವು ಬಾರಿ ಸೂಚಿಸಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರ ನೆರವನ್ನು ಕೋರಲಾಗಿದೆ.ಪ್ರಮುಖವಾಗಿ
1) ಭಾರತ ಸಂವಿಧಾನದ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಕಡ್ಡಾಯವಾಗಿದೆ.
2) ಕಾಸರಗೋಡಿನ ಎಲ್ಲಾ ಪೋಲೀಸ್ ಠಾಣೆಗಳು, ರೈಲು ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಸಂಕೇತ ಕನ್ನಡ ಫಲಕಗಳನ್ನು ಸ್ಥಾಪಿಸಬೇಕು.
3) ಸರ್ಕಾರಿ ಸಾರ್ವಜನಿಕ ಕಚೇರಿ ಪತ್ರವ್ಯವಹಾರವು ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯ ಕನ್ನಡ ಭಾಷೆಯಲ್ಲಿ ಬರೆಯಲು ಅನುಮತಿಸಬೇಕು.
4) ಕಾಸರಗೋಡು ಜಿಲ್ಲೆಯಲ್ಲಿ ಉದ್ಯೋಗ ಖಾಲಿ ಸ್ಥಾನಗಳನ್ನು ಕೇರಳ ಲೋಕಸೇವಾ ಆಯೋಗ ಅಥವಾ ನೇಮಕಾತಿ ಸಂಸ್ಥೆಯಿಂದ ಬಂದ ಅರ್ಜಿಗಳ ಆಧಾರದ ಮೇಲೆ ಭರ್ತಿ ಮಾಡದೇ, ಸ್ಥಳೀಯ ಭಾಷಾ ಅಲ್ಪಸಂಖ್ಯಾತರ ಜನಸಂಖ್ಯೆ ಆಧಾರದ ಮೇಲೆ ಭರ್ತಿ ಮಾಡಬೇಕು.
5) ಭಾಷಾ ಅಲ್ಪಸಂಖ್ಯಾತರ ಕನ್ನಡಿಗರು ಎದುರಿಸುವ ಸಮಸ್ಯೆಗಳ ಬಗ್ಗೆ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತ ಸಭೆಗಳನ್ನು ನಡೆಸಲು ಕಾಸರಗೋಡು ಜಿಲ್ಲಾ ಕಲೆಕ್ಟರ್ ಸಮಿತಿಯಿಂದ ಕ್ರಮ ಕೈಗೊಳ್ಳಬೇಕು.
ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ, ಹಲವು ಸೂಚನೆಗಳನ್ನು ಭಾಷಾ ಅಲ್ಪ ಸಂಖ್ಯಾತ ಸಚಿವಾಲಯ ಭಾರತ ಸರ್ಕಾರದಿಂದ ಕೇರಳ ಸರ್ಕಾರಕ್ಕೆ ನೀಡಲಾಗಿದೆ. ಆದರೆ ನಿರಂತರವಾಗಿ, ಸಂವಿಧಾನದ ಂಡಿಣiಛಿಟe-30, 347, 350, 350ಂ, 350ಃ ಮತ್ತು ಭಾರತದ ಸರ್ಕಾರ ಮತ್ತು ಇತರ ಸೂಕ್ತ ಪ್ರಾಧಿಕಾರಗಳಿಂದ ಜಾರಿಗೊಂಡ ಇತರ ಸರ್ಕಾರದ ಆದೇಶಗಳು ಮತ್ತು ಸೂಚನೆಗಳನ್ನು ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದಂತೆ ಉಲ್ಲಂಘಿಸಲ್ಪಟ್ಟಿವೆ ಹಾಗೂ ನಮ್ಮ ಸಂವಿಧಾನವು ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ನೀಡಿರುವುದು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲವು ವ್ಯವಸ್ಥೆಗಳನ್ನು ಮಾಡಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರವು ಎಲ್ಲಾ ಜನರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತಿದೆ. ಮಲೆಯಾಳಂ ಭಾಷಾ ಬಿಲ್ಲು- 2025 ಸೆಕ್ಷನ್ 2(6) ಪ್ರಕಾರ, ಮೊದಲ ಭಾಷೆ ಮಲಯಾಳಂಅನ್ನು ಕಾಸರಗೋಡು ಶಾಲೆಗಳಲ್ಲಿ ಸರಕಾರದ ಮತ್ತು ಖಾಸಗಿ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಕಡ್ಡಾಯ ವಿಷಯವಾಗಿ ಒತ್ತಾಯ ಪೂರ್ವಕ ಕಲಿಸಲ್ಪಡುವಂತೆ ಮಸೂದೆ ತರಲಾಗಿದೆ.
ಕಾಸರಗೋಡು ಮತ್ತು ಕೇರಳದ ಇತರ ಕನ್ನಡಭಾಷಿಕರು ಮಾತನಾಡುವ ಪ್ರದೇಶಗಳಲ್ಲಿ, ಭಾಷಾತ್ಮಕ ಸುಲಲತೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೊದಲ ಭಾಷೆಯಾಗಿ ಕನ್ನಡವನ್ನು ಮತ್ತು ಎರಡನೇ ಭಾಷೆಯಾಗಿ ಮತ್ತೊಂದು ಭಾಷೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳು ಹಿಂದಿ ಅಥವಾ ಸಂಸ್ಕøತ ಅಥವಾ ಉರ್ದುವನ್ನು ಎರಡನೇ ಭಾಷೆಯಾಗಿ ಆಯ್ಕೆಮಾಡಲು ಸಹಾಯ ಮಾಡುತ್ತದೆ.
ಈ ಬಿಲ್ ಅಂಗೀಕರಿಸಿದರೆ, ಕನ್ನಡ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ತಿಳಿಯದಿದ್ದರೂ ಬಲವತ್ತಾಗಿ ಕಲಿಯಬೇಕಾಗಬಹುದು, ಇದು ಅವರ ಭವಿಷ್ಯಕ್ಕೆ ಪೂರಕವಾಗುತ್ತದೆ. ವಿಶೇಷವಾಗಿ ದೇಶದ ಇತರ ಭಾಗಗಳಲ್ಲಿ ಈ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಿದರೆ, ಅವರಿಗೆ ಸಂಪೂರ್ಣ ಹೊಡೆತ ಬೀಳಲಿದೆ.
ಈ ಬಿಲ್ ಕಾಸರಗೋಡು ಜಿಲ್ಲೆಯಲ್ಲಿ, ಇದು ಕನ್ನಡ ಭಾಷಾತ್ಮಕ ಸುಲಭ್ಯತೆ ಪ್ರದೇಶವಾದಲ್ಲಿ, ಜಾರಿಗೆ ಬರುವುದಾದರೆ, ಇದರ ಪರಿಣಾಮಗಳು ವ್ಯಾಪಕವಾಗಿದ್ದು, ಕನ್ನಡ ಭಾಷೆಗೆ ಮತ್ತು ಶತಮಾನಗಳಿಂದ ಕನ್ನಡವನ್ನು ಮಾತೃಭಾಷೆಯಾಗಿ ಬಳಸಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪೂರಕವಾಗಲಿದೆ.
ಆದ್ದರಿಂದ ಕೇರಳ ಸರ್ಕಾರದಿಂದ ಕಳುಹಿಸಲಾದ ಭಾಷಾ ವಿಧೇಯಕ 2025 ಅನ್ನು ತಿರಸ್ಕರಿಸಲು ಅಥವಾ ಮರು ಪರಿಶೀಲಿಸಲು ಮಾನ್ಯ ಕೇರಳ ರಾಜ್ಯಪಾಲರನ್ನು ಭೇಟಿ ಮಾಡಿ ವಿನಂತಿಸಲಾಗಿದೆ. ಏಕೆಂದರೆ ಇದು ಪೂರ್ಣವಾಗಿ ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸಂವಿಧಾನಾತ್ಮಕ ನಿರ್ಧಾರಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯಪಾಲರು ಈ ಬಗ್ಗೆ ಬಿಲ್ಲನ್ನು ತಡೆಹಿಡಿಯಲಾಗಿದ್ದು ಸಂಪೂರ್ಣ ಪರಿಶೀಲನೆ ಮಾಡಿ ಕಾಸರಗೋಡು ಕನ್ನಡಿಗರ ಹಿತ ಕಾಯುವುದಾಗಿ ನಿಯೋಗಕ್ಕೆ ಆಶ್ವಾಸನೆ ನೀಡಿದರು.
ರಾಜ್ಯಪಾಲರನ್ನು ಭೇಟಿಯಾದ ನಿಯೋಗದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯರಾದ ಎ.ಆರ್.ಸುಬ್ಬಯ್ಯಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಹಿರಿಯರಾದ ತೆಕ್ಕೇಕೆರೆ ಶಂಕರನಾರಾಯಣ ಭಟ್, ವಕೀಲ ಮುರಳೀಧರ ಬಳ್ಳುಕ್ಕುರಾಯ, ಕೇರಳ ಪ್ರಾಂತ್ಯ ಅಧ್ಯಾಪಕರ ಸಂಘದ ಅಧ್ಯಕ್ಷ ಸುಖೇಶ್. ಎ ಮೊದಲಾದವರು ಉಪಸ್ಥಿತರಿದ್ದರು.



