ಕಾಸರಗೋಡು: ನಗರದ ಕೋಟೆ, ಪಳ್ಳದ ಕೊಟ್ಯ ದೂಮಾವತಿ ಉತ್ಸವ ಸಮಿತಿಯ ಉತ್ಸವ ಖರ್ಚು, ವೆಚ್ಚಗಳ ಹಾಗೂ ಸಮಿತಿ ವಾರ್ಷಿಕ ಸಭೆ ನಾಗರಕಟ್ಟೆಯ ಶ್ರೀ ಶಾರದಾ ಭಜನಾಶ್ರಮ ಪರಿಸರದಲ್ಲಿ ಜರುಗಿತು.
ಸಮಿತಿ ಅಧ್ಯಕ್ಷ ನವೀನ್ ನಾಯ್ಕ್ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉತ್ಸವ ಸಮಿತಿಯ ಖರ್ಚು, ವೆಚ್ಚಗಳ ಬಗ್ಗೆ ಅವಲೋಕನ ನಡೆಯಿಸಲಾಯಿತು. ಕೋಶಾಧಿಕಾರಿ, ಕನ್ನಡ ಭವನದ ಡಾ ವಾಮನ್ ರಾವ್ ಬೇಕಲ್ ಲೆಕ್ಕ ಪತ್ರ ಮಂಡಿಸಿದರು. ಸಮಿತಿಯನ್ನು ಮುಂದಿನ ವರ್ಷಕ್ಕೆ ಯಥಾಪ್ರಕಾರ ಮುಂದುವರಿಸುವ ತೀರ್ಮಾನಕ್ಕೆ ಅಂಗೀಕಾರ ಪಡೆಯಲಾಯಿತು. ಈ ಸಂಧರ್ಭ ಕೋಶಾಧಿಕಾರಿ ಲೆಕ್ಕ ಪತ್ರ ಪುಸ್ತಕವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಉದಯ ನಾಗರಕಟ್ಟೆ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ದಾಸ್ ಕೊರಕೋಡು ಕಾರ್ಯಕ್ರಮ ನಿರೂಪಿಸಿದರು. ಕೇಶವ ವಂದಿಸಿದರು.


