HEALTH TIPS

ಬಾಂಗ್ಲಾ ಸಂಸತ್ ಚುನಾವಣೆ: ಅಧಿಕಾರಿಗಳ ಕುಟುಂಬಗಳಿಗೆ ಭಾರತಕ್ಕೆ ವಾಪಸ್ ಆಗಲು ಸೂಚನೆ

ನವದೆಹಲಿ: ಬಾಂಗ್ಲಾದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ನಿಯೋಜಿಸಲಾದ ಅಧಿಕಾರಿಗಳ ಕುಟುಂಬಗಳಿಗೆ ತವರಿಗೆ ವಾಪಸಾಗುವಂತೆ ಭಾರತ ಮಂಗಳವಾರ ಸಲಹೆ ನೀಡಿದೆ.

ಬಾಂಗ್ಲಾದೇಶದಲ್ಲಿ ಸಂಸತ್ ಚುನಾವಣೆಗೆ ಒಂದು ವಾರವಿದ್ದು, ಅದಕ್ಕೂ ಮುಂಚೆ ಭಾರತ ಈ ನಿರ್ಧಾರ ಕೈಗೊಂಡಿದೆ.

ಆದಾಗ್ಯೂ, ರಾಜತಾಂತ್ರಿಕರ ಕುಟುಂಬದವರು ಮತ್ತು ಇತರ ಅಧಿಕಾರಿಗಳು ಯಾವಾಗ ಭಾರತಕ್ಕೆ ಮರಳುತ್ತಾರೆ ಎಂದು ಇನ್ನೂ ತಿಳಿದುಬಂದಿಲ್ಲ.

ತೀವ್ರಗಾಮಿ ಚಟುವಟಿಕೆ ಹೆಚ್ಚುತ್ತಿರುವ ಕಾರಣ ಬಾಂಗ್ಲಾದೇಶವನ್ನು ಭಾರತೀಯ ಅಧಿಕಾರಿಗಳ ಮತ್ತು ರಾಜತಾಂತ್ರಿಕರ ಕುಟುಂಬಗಳು ಇಲ್ಲದ ಸ್ಥಳವಾಗಿ ಮಾಡಲು ಭಾರತ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries