HEALTH TIPS

ಪೋತ್ತಿಯ ಜೊತೆಗಿನ ಚಿತ್ರಕ್ಕೆ ಪ್ರತಿಕ್ರಿಯಿಸಿದ ಕಡಕಂಪಳ್ಳಿ ಸುರೇಂದ್ರನ್

ತಿರುವನಂತಪುರಂ: ಶಬರಿಮಲೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಜೊತೆಗಿನ ಚಿತ್ರಗಳು ಹೊರಬಂದ ನಂತರ ಮಾಜಿ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ವಿವರಣೆ ನೀಡಿದ್ದಾರೆ. 


ಒಂದೇ ಮನೆಗೆ 10 ಬಾರಿ ತೆರಳಿದ್ದರೆ ಹೋಗಿದ್ದೆ ಎಂದು ಹೇಳಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು. ಈಗ ಹೊರಹೊಮ್ಮಿರುವ ಚಿತ್ರವು ಪೋತ್ತಿ ತನ್ನ ಸಹೋದರಿಯ ಮಗಳಿಗೆ ಸ್ಮರಣಿಕೆ ನೀಡುತ್ತಿರುವ ಚಿತ್ರವಾಗಿದೆ.ಮಕ್ಕಳು ಗೆದ್ದರೆ, ಅವರು ಮನೆಗೆ ಹೋಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಎಂಟು ವರ್ಷಗಳ ಹಿಂದೆ ಒಂದು ಮನೆಗೆ ಹೋಗಿದ್ದು ನೆನಪಿನಲ್ಲಿದೆಯೇ ಎಮದು ಕೇಳಿದರೆ ಕಷ್ಟವಿದೆ ಎಂದು ಕಡಕಂಪಳ್ಳಿ ಸುರೇಂದ್ರನ್ ಹೇಳಿದರು.

ಹೊಸದಾಗಿ ಬಿಡುಗಡೆಯಾದ ಚಿತ್ರದಲ್ಲಿ ಉಣ್ಣಿಕೃಷ್ಣನ್ ಪೋತ್ತಿಯ ಸಹೋದರಿಯ ಮಗಳಿಗೆ ರ್ಯಾಂಕ್ ಪಡೆದಿದ್ದಕ್ಕಾಗಿ ಪೆನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ತೋರಿಸಲಾಗಿದೆ. ಪೋತ್ತಿಯ ಮನೆಗೆ ಒಮ್ಮೆ ಮಾತ್ರ ಹೋಗಿದ್ದೆ ಎಂದು ಕಡಕಂಪಳ್ಳಿ ಈ ಹಿಂದೆ ಹೇಳಿಕೊಂಡಿದ್ದರು. ಪೋತ್ತಿಯ ಮನೆಗೆ ಸಾರ್ವಜನಿಕವಾಗಿ ಒಮ್ಮೆ ಮಾತ್ರ ಹೋಗಿದ್ದೆ ಮತ್ತು ಉಣ್ಣಿಕೃಷ್ಣನ್ ಪೋತ್ತಿಯನ್ನು ಶಬರಿಮಲೆಗೆ ಹೋದಾಗಲೆಲ್ಲಾ ನೋಡಿದ್ದೆ ಎಂದು ಕಡಕಂಪಳ್ಳಿ ಹೇಳಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries