ಕಾಸರಗೋಡು: ರಾಜ್ಯದ ಪ್ರಗತಿ ಮತ್ತು ಅಭಿವೃದ್ಧಿಗೆ ಹೊಸ ಶಕ್ತಿ ಮತ್ತು ನಿರ್ದೇಶನ ಒದಗಿಸಲು ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನವ ಕೇರಳ ಸಿಟಿಸನ್ ರೆಸ್ಪಾನ್ಸ್ ಯೋಜನೆಯ ಎರಡನೇ ಹಂತದ ಕಾರ್ಯಕ್ರಮದನ್ವಯ ವಿದ್ಯಾರ್ಥಿಗಳು, ಯುವಕ, ಯುವತಿಯರೊಂದಿಗೆ ಸಂವಾದ ಕಾರ್ಯಕ್ರಮ ಕಾಞಂಗಾಡಿನಲ್ಲಿ ಜರುಗಿತು.
ಕಾಞಂಗಾಡ್ ನಗರಸಭೆಯ ಅಧ್ಯಕ್ಷ ವಿ.ವಿ. ರಮೇಶನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಯುವ ಸಂಯೋಜಕ ಎಂ.ವಿ. ರತೀಶ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪ್ರಣವ್, ಟೀಮ್ ಕೇರಳ ಜಿಲ್ಲಾ ಕ್ಯಾಪ್ಟನ್ ರೆನೀಶ್ ಮತ್ತು ಹರಿತಾ ಉಪಸ್ಥಿತರಿದ್ದರು. ಕಾಞಂಗಾಡ್ ನಗರಸಭಾ ಯುವ ಸಂಯೋಜಕ ಕೃತಿಕ್ ರಾಜ್ ಸ್ವಾಗತಿಸಿದರು. ಅಭಿಯಾನದಲ್ಲಿ ಜನಾಭಿಪ್ರಾಯ ಸಂಗ್ರಹದೊಂದಿಗೆ ಸಂವಾದ, ಕಾಮೆಂಟ್ಗಳು ಮತ್ತು ಹೊಸ ಸಲಹೆಗಳನ್ನು ಸ್ವೀಕರಿಸಲಾಯಿತು.


