ತಿರುವನಂತಪುರಂ: ಸಿಪಿಐ ವಿರೋಧದ ಬಳಿಕ ಕೇಂದ್ರ ಸರ್ಕಾರದೊಂದಿಗಿನ ಪಿಎಂಶ್ರೀ ಒಪ್ಪಂದದಿಂದ ಹಿಂದೆ ಸರಿಯುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರೂ, ಕೇರಳವು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಆಧಾರಿತ ಎನ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ಬಳಸುವುದನ್ನು ಮುಂದುವರಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರವು ಮೊಘಲ್ ಆಳ್ವಿಕೆ ಸೇರಿದಂತೆ ಇತಿಹಾಸ ಪಾಠಗಳನ್ನು ಪಠ್ಯಕ್ರಮದಿಂದ ನಿರಂತರವಾಗಿ ಕಡಿತಗೊಳಿಸುತ್ತಿದ್ದರೂ, ಸಮಾಜ ವಿಜ್ಞಾನ ಮತ್ತು ಇತಿಹಾಸ ಸೇರಿದಂತೆ ಪಠ್ಯಪುಸ್ತಕಗಳನ್ನು ರಾಜ್ಯದಲ್ಲಿ ತೆಗೆದುಹಾಕಲಾಗುವುದಿಲ್ಲ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಹೊಸ ಪಠ್ಯಕ್ರಮದ ಅನುಷ್ಠಾನದ ಭಾಗವಾಗಿ, ಸಚಿವ ವಿ. ಶಿವನ್ಕುಟ್ಟಿ ಅಧ್ಯಕ್ಷತೆಯ ಪಠ್ಯಕ್ರಮ ಸಮಿತಿಯು ಸೋಮವಾರ ಈ ನಿರ್ಧಾರವನ್ನು ತೆಗೆದುಕೊಂಡಿತು.
ಹಿಂದಿನ ವರ್ಷಗಳಲ್ಲಿ ಇತಿಹಾಸದ ಪಾಠಗಳನ್ನು ಕಡಿತಗೊಳಿಸುವ ಬಗ್ಗೆ ವಿವಾದ ಉಂಟಾದಾಗ, ಕೈಬಿಡಲಾದ ವಿಷಯವನ್ನು ಒಳಗೊಂಡಂತೆ ಕೇರಳವು ಪ್ರತ್ಯೇಕ ಪುಸ್ತಕವನ್ನು ಪ್ರಕಟಿಸಿತ್ತು. ಆ ಸಮಯದಲ್ಲಿ, ಇತಿಹಾಸ ಮತ್ತು ಸಮಾಜ ವಿಜ್ಞಾನದಂತಹ ಕೇಂದ್ರವು 'ಸ್ವಾಧೀನಪಡಿಸಿಕೊಂಡ' ವಿಷಯಗಳ ಕುರಿತು ರಾಜ್ಯವು ತನ್ನದೇ ಆದ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬ ಬೇಡಿಕೆ ಇತ್ತು.
ಕೇಂದ್ರ ಸರ್ಕಾರದ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಪಾಠಗಳನ್ನು ಮತ್ತಷ್ಟು ಕಡಿತಗೊಳಿಸಬಹುದಾದ ಪರಿಸ್ಥಿತಿ ಮುಂದುವರಿದಿದ್ದರೂ ಓಅಇಖಖಿ ಪುಸ್ತಕಗಳನ್ನು ಮುಂದುವರಿಸುವ ನಿರ್ಧಾರದ ಬಗ್ಗೆ ಪಠ್ಯಕ್ರಮ ಸಮಿತಿಯಲ್ಲಿ ಪ್ರಶ್ನೆಯನ್ನು ಎತ್ತಲಾಯಿತು. ಹೊಸ ಪುಸ್ತಕಗಳು ಬಂದಾಗ ಅವುಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂಬುದು ಸರ್ಕಾರದ ಉತ್ತರವಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ 11 ನೇ ತರಗತಿಯಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ, ಸಾಮಾನ್ಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಸ್.ಸಿ.ಇ.ಆರ್.ಟಿ. ಪ್ರಸ್ತುತ 41 ಪುಸ್ತಕಗಳನ್ನು ಸಿದ್ಧಪಡಿಸಿದೆ. ಇಂಗ್ಲಿಷ್ ಮತ್ತು ಮಲಯಾಳಂ ಸೇರಿದಂತೆ ಭಾಷಾ ವಿಷಯಗಳ ಜೊತೆಗೆ, 41 ಪುಸ್ತಕಗಳು ಕಂಪ್ಯೂಟರ್ ವಿಜ್ಞಾನ, ಸಮಾಜ ಕಾರ್ಯ, ಎಲೆಕ್ಟ್ರಾನಿಕ್ಸ್ ಮತ್ತು ಗೃಹ ವಿಜ್ಞಾನದಂತಹ ವಿಷಯಗಳ ಮೇಲೆ ಇವೆ. ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ವಿಜ್ಞಾನ ವಿಷಯಗಳು ಸೇರಿದಂತೆ 44 ಪುಸ್ತಕಗಳಿಗೆ ಎಂದಿನಂತೆÉನ್.ಸಿ.ಇ.ಆರ್.ಟಿ. ಅನ್ನು ಅವಲಂಬಿಸಲು ನಿರ್ಧರಿಸಲಾಗಿದೆ.

