ಉಪ್ಪಳ : ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಕೇರಳ ಉರ್ದು ಟೀಚರ್ಸ್ ಅಕಾಡೆಮಿಕ್ ಕೌನ್ಸಿಲ್ ಆಯೋಜಿಸಿದ ರಾಜ್ಯಮಟ್ಟದ ಆನ್ಲೈನ್ ಇಖ್ಬಾಲ್ ಟ್ಯಾಲೆಂಟ್ ಟೆಸ್ಟ್ ಮಂಜೇಶ್ವರ ಬಿಆರ್.ಸಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ ಉದ್ಘಾಟಿಸಿದರು. ಉಪಜಿಲ್ಲಾ ಐಟಿ ಸಂಯೋಜಕಿ ಸಿತಾರ ಕಾಟನ್ ಅಧ್ಯಕ್ಷತೆ ವಹಿಸಿದ್ದರು. ಬಿಪಿಸಿ ರಾಜಗೋಪಾಲ್, ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಧರ್ಮತ್ತಡ್ಕ ಶಾಲಾ ಶಿಕ್ಷಕಿ ಪದ್ಮಾವತಿ ಶುಭಹಾರೈಸಿದರು. ಉಪಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಸಾಬಿರ್ ಸ್ವಾಗತಿಸಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಸುಲೈಖಾ ವಂದಿಸಿದರು. ಸಮಾರಂಭದಲ್ಲಿ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ ಅವರಿಗೆ ವಿದಾಯ ಸಮಾರಂಭವನ್ನು ನಡೆಸಲಾಯಿತು.

.jpg)
