ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದಾಗಿ ಬಾಂಗ್ಲಾವು ತೈಲದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಡೀಸೆಲ್ ಪೂರೈಕೆಯು, ಉಭಯ ನೆರೆಹೊರೆಯ ದೇಶಗಳ ನಡುವೆ ಏರ್ಪಟ್ಟ ಬೃಹತ್ ವಾರ್ಷಿಕ ತೈಲ ಪೂರೈಕೆ ಒಪ್ಪಂದದ ಭಾಗವಾಗಿದೆ.
ಈ ಡೀಸೆಲ್ ಅಸ್ಸಾಂನ ನುಮಾಲಿಗಡ ತೈಲಸಂಸ್ಕರಣಾಗಾರದಿಂದ ಬಾಂಗ್ಲಾದೇಶ- ಭಾರತ ಮಿತ್ರತ್ವ ಪೈಪ್ಲೈನ್ ಮೂಲಕ ಬಾಂಗ್ಲಾದೇಶದ ದಿನಾಜ್ಪುರವನ್ನು ತಲುಪಲಿದೆ. ಬಾಂಗ್ಲಾದೇಶ-ಭಾರತ ಮಿತ್ರತ್ವ ಪೈಪ್ಲೈನ್ ಅನ್ನು 2023ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ಬಾಂಗ್ಲಾ ಪ್ರಧಾನಿ ಹಸೀನಾ ಶೇಖ್ ಉದ್ಘಾಟಿಸಿದ್ದರು.

