ತಿರುವನಂತಪುರಂ: ಮಹಿಳೆಯರ ಶಬರಿಮಲೆ ಎಂದೇ ಪ್ರಸಿದ್ಧವಾಗಿರುವ ಅಟ್ಟುಕ್ಕಾಲ್ ಪೊಂಗಾಲ ಇಂದು ನಡೆಯಲಿದೆ. ಲಕ್ಷಾಂತರ ಮಹಿಳೆಯರು ಭಾಗವಹಿಸುವ ಅಟ್ಟುಕ್ಕಾಲ್ ಪೊಂಗಾಲ ಸಮಾರಂಭಕ್ಕೆ ಕೇವಲ ಗಂಟೆಗಳು ಮಾತ್ರ ಉಳಿದಿವೆ.
ಇಂದು ಬೆಳಿಗ್ಗೆ 9.45 ಕ್ಕೆ ಭಂಡಾರ ಒಲೆಯಲ್ಲಿ ಅಗ್ನಿಸ್ಪರ್ಶ ಮಾಡಲಾಗುವುದು. ಮಧ್ಯಾಹ್ನ 2.15 ಕ್ಕೆ ಪೊಂಗಾಲ ನಿವೇದನೆ ನಡೆಯಲಿದೆ. ಅಟ್ಟುಕ್ಕಾಲ್ ಭಗವತಿ ದೇವಸ್ಥಾನ ಟ್ರಸ್ಟ್ನ ಪದಾಧಿಕಾರಿಗಳು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ವ್ಯಾಪಕ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಂಭ ಮಾಸದ ಪೌರ್ಣಮಿಯ ದಿನವಾದ ಮಂಗಳವಾರ ಬೆಳಿಗ್ಗೆ 9.15 ಕ್ಕೆ ಶುಭ ಪ್ರಾರ್ಥನೆಯೊಂದಿಗೆ ಸಮಾರಂಭಗಳು ಪ್ರಾರಂಭವಾಗಲಿವೆ. ತೋಟ್ಟಂ ಗಾಯಕರು(ತೋಟ್ಟಂ ಪಾಟ್ಟ್) ಪಾಂಡ್ಯ ರಾಜನನ್ನು ಕೊಂದ ಕಣ್ಣಕಿ ಚರಿತಂನ ಭಾಗವನ್ನು ಹಾಡಿದ ತಕ್ಷಣ, ತಂತ್ರಿ ಪರಮೇಶ್ವರನ್ ಭಟ್ಟತ್ತಿರಿಪಾದ್ ಅವರ ಸಮ್ಮುಖದಲ್ಲಿ ಮೇಲ್ಶಾಂತಿ ಅನೀಶ್ ನಂಬೂದಿರಿ ಅವರು ದೇವಾಲಯದಿಂದ ದೀಪವನ್ನು ತೆಗೆದುಕೊಂಡು ದೇವಾಲಯದ ಅಗ್ರಸಾಲೆಯ ಒಲೆಗೆ ಪೊಂಗಾಲಕ್ಕೆ ಅಗ್ನಿ ಬೆಳಗಿಸುವರು. ಅದೇ ದೀಪವನ್ನು ಮೇಲ್ಶಾಂತಿಯವರು ಸ್ವೀಕರಿಸಿ ವಲಿಯ ತಿಡಪಲ್ಲಿ(ದೊಡ್ಡ ಪ್ರಧಾನ ಒಲೆ) ಮತ್ತು ದೇವಾಲಯದ ಮುಂದೆ ಸಿದ್ಧಪಡಿಸಲಾದ ಇತರ ಒಲೆಗಳಿಗೆ ಬೆಂಕಿÉ ಹಚ್ಚುತ್ತಾರೆ. ಭಕ್ತರು ಭಂಡಾರ ಬೆಂಕಿಯಿಂದ ಸುರಿದ ದೀಪವನ್ನು ಅನುಕ್ರಮವಾಗಿ ಸ್ವೀಕರಿಸಿ ತಮ್ಮ ಹೃದಯದಲ್ಲಿ ಬೆಳಗುತ್ತಾರೆ. ಮಧ್ಯಾಹ್ನ 2.15 ಕ್ಕೆ ಮಧ್ಯಾಹ್ನ ಪೂಜೆಯ ನಂತರ ಪೊಂಗಾಲ ನೈವೇದ್ಯ ಅರ್ಪಿಸಲಾಗುತ್ತದೆ.
ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಒಲೆಗಳನ್ನು ಹಚ್ಚಬಾರದು ಎಂದು ಪೋಲೀಸರು ಸೂಚನೆ ನೀಡಿದ್ದಾರೆ. ದೇವಾಲಯದ ಆವರಣದಲ್ಲಿ ಪೊಂಗಾಲ ಅರ್ಪಿಸಲು ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಗ್ರಹಣದ ದಿನವಾದ್ದರಿಂದ, ಮಧ್ಯಾಹ್ನ 3.10 ರಿಂದ ಸಂಜೆ 7 ರವರೆಗೆ ದೇವಾಲಯ ಮುಚ್ಚಲ್ಪಡುತ್ತದೆ, ಆದ್ದರಿಂದ ದರ್ಶನ ಇರುವುದಿಲ್ಲ. ತಾಲಪ್ಪೊಲಿಯಲ್ಲಿ ಭಾಗವಹಿಸುವವರು ಮಧ್ಯಾಹ್ನ 1.30 ಕ್ಕೆ ಮೊದಲು ದೇವಾಲಯಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ದೇವಿಯನ್ನು ರಾತ್ರಿ 9.45 ಕ್ಕೆ ಸ್ನಾನ ಮಾಡಿಸಲಾಗುತ್ತದೆ. ಈ ವರ್ಷದ ಪೊಂಗಾಲ ಉತ್ಸವವು ರಾತ್ರಿ 12.45 ಕ್ಕೆ ಕುರುದಿ ತರ್ಪಣಂನೊಂದಿಗೆ ಮುಕ್ತಾಯಗೊಳ್ಳುತ್ತದೆ.

