HEALTH TIPS

ತಮಿಳುನಾಡು: ರಾಜ್ಯಸಭೆಗೆ ಆರು ಮಂದಿ ಅವಿರೋಧ ಆಯ್ಕೆ ಸಾಧ್ಯತೆ

ಚೆನ್ನೈ: ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್, ಪಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳಿಗೆ ಸೇರಿದ ಎಲ್ಲ ಆರು ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಅಭ್ಯರ್ಥಿಗಳಾದ ತಿರುಚಿ ಶಿವ ಮತ್ತು ಜೆ. ಕಾನ್ಸ್‌ಟಂಟೈನ್‌ ರವೀಂದ್ರನ್‌ (ಡಿಎಂಕೆ), ಎಂ. ತಂಬಿದುರೈ (ಎಐಎಡಿಎಂಕೆ), ಕ್ರಿಸ್ಟೋಫರ್‌ ತಿಲಕ್‌ (ಕಾಂಗ್ರೆಸ್‌), ಅನ್ಬುಮಣಿ ರಾಮದಾಸ್‌ (ಪಿಎಂಕೆ), ಮತ್ತು ಎಲ್‌.ಕೆ.ಸುದೀಶ್‌ (ಡಿಎಂಡಿಕೆ) ತಮ್ಮ ನಾಮಪತ್ರಗಳನ್ನು ಗುರುವಾರ ಸಲ್ಲಿಸಿದರು. ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಲಿದೆ.

ರಾಜ್ಯಸಭೆಯ ಆರು ಸದಸ್ಯರ ಅವಧಿ ಮುಗಿದ ಕಾರಣ, ದ್ವೈವಾರ್ಷಿಕ ಚುನಾವಣೆಗಳು ನಡೆಯುತ್ತಿವೆ. ಈ ಪೈಕಿ ಶಿವ ಮತ್ತು ತಂಬಿದುರೈ ಅವರನ್ನು ಆಯಾ ಪಕ್ಷಗಳು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿವೆ.

ತಮಿಳು ವಾಹಿನಿಗಳಲ್ಲಿ ಜನಪ್ರಿಯವಾಗಿರುವ ರವೀಂದ್ರನ್‌ ಡಿಎಂಕೆ ಪಕ್ಷದ ಇಂಗ್ಲಿಷ್‌ ಮುಖವಾಣಿ 'ರೈಸಿಂಗ್‌ ಸನ್‌'ನ ಸಂಪಾದಕರೂ ಆಗಿದ್ದಾರೆ. ಅವರು ಕೆಲ ವರ್ಷಗಳ ಹಿಂದೆ ಡಿಎಂಡಿಕೆ ಪಕ್ಷದಿಂದ ಡಿಎಂಕೆಗೆ ಸೇರ್ಪಡೆಯಾದ ಕಾರಣ, ಅವರ ನಾಮನಿರ್ದೇಶನವು ಮಹತ್ವ ಪಡೆದಿದೆ.

ಡಿಎಂಕೆಯು ಡಿಎಂಡಿಕೆ ಪಕ್ಷಕ್ಕೆ ನೀಡಿದ್ದ ಭರವಸೆಯಂತೆ ಸುದೀಶ್‌ ಅವರಿಗೆ ರಾಜ್ಯಸಭಾ ಸ್ಥಾನ ಲಭಿಸಿದೆ. ಮತ್ತೊಂದೆಡೆ, ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮೀಸಲಾದ ಏಕೈಕ ಸ್ಥಾನಕ್ಕೆ ತಿಲಕ್‌ ಅವರು ಅಭ್ಯರ್ಥಿಯಾಗಿದ್ದಾರೆ. ಇನ್ನು ಅನ್ಬುಮಣಿ ಅವರ ಪಿಎಂಕೆ ಪಕ್ಷಕ್ಕೆ ಅದರ ಮಿತ್ರಪಕ್ಷವಾದ ಎಐಎಡಿಎಂಕೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಈ ಸದಸ್ಯರು ಅಧಿಕೃತವಾಗಿ ಆಯ್ಕೆಯಾದ ನಂತರ, ರಾಜ್ಯಸಭೆಯಲ್ಲಿ ಡಿಎಂಕೆ ಪಕ್ಷದ ಬಲವು ಪ್ರಸ್ತುತ ಇರುವ 10ರಿಂದ 8ಕ್ಕೆ ಇಳಿಕೆಯಾಗಲಿದೆ. ಎಐಎಡಿಎಂಕೆ ಪಕ್ಷದ ಬಲವು ಐದರಲ್ಲಿಯೇ ಮುಂದುವರಿಯಲಿದೆ. ತಿಲಕ್‌ ಆಯ್ಕೆ ಬಳಿಕ ತಮಿಳುನಾಡಿನಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಬಲವು ಎರಡಕ್ಕೆ ಏರಿಕೆಯಾಗಲಿದೆ. ಈಗಾಗಲೇ ಪಿ. ಚಿದಂಬರಂ ಅವರು ಹಾಲಿ ಸದಸ್ಯರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries