HEALTH TIPS

ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬುಡಮೇಲುಗೊಳಿಸಲು ಕಾರ್ಪೋರೇಟ್‍ಗಳು ಲಕ್ಷ್ಯವಿರಿಸಿವೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ರಾಜ್ಯದ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬುಡಮೇಲುಗೊಳಿಸುವ ಗುರಿಯನ್ನು ಕಾರ್ಪೋರೇಟ್‍ಗಳು ಹೊಂದಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. 

ಜನರಲ್ ಆಸ್ಪತ್ರೆಯಲ್ಲಿ ಕಿಪ್ಭಿ ಮೂಲಕ ಜಾರಿಗೆ ತರಲಾಗುತ್ತಿರುವ ಮಾಸ್ಟರ್ ಪ್ಲಾನ್‍ಗೆ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. 


ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಹಾರಗಳನ್ನು ಸರ್ಕಾರ ಸಮರ್ಥಿಸುವುದಿಲ್ಲ ಅಥವಾ ರಕ್ಷಿಸುವುದಿಲ್ಲ. ಅಂತಹ ಲೋಪಗಳ ಬಗ್ಗೆ ಅದು ಕಾಳಜಿ ಹೊಮದಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿನ ಅವ್ಯವಹಾರಗಳಿಗೆ ಕಣ್ಣು ಮುಚ್ಚಲಾಗದು. ರಾಜ್ಯದ ಆಸ್ಪತ್ರೆಗಳು ಚಿಕಿತ್ಸಾ ಕೇಂದ್ರಗಳನ್ನು ಮೀರಿ ಕಲಿಕೆ ಮತ್ತು ಸಂಶೋಧನಾ ಕೇಂದ್ರಗಳಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿ.ಕೆ. ಪ್ರಶಾಂತ್ ಶಾಸಕ, ಜಿಲ್ಲಾ ವೈದ್ಯಾಧಿಕಾರಿ ಡಾ. ಬಿಂದು, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ರೀನಾ, ಜನರಲ್ ಆಸ್ಪತ್ರೆ ಅಧೀಕ್ಷಕಿ ಡಾ. ಕೃಷ್ಣವೇಣಿ, ನಿಗಮ ಸ್ಥಾಯಿ ಸಮಿತಿ ಅಧ್ಯಕ್ಷೆ ಪಟ್ಟೂರು ರಾಧಾಕೃಷ್ಣನ್, ಕೌನ್ಸಿಲರ್ ವಂಚಿಯೂರು ಪಿ. ಬಾಬು, ಐ.ಪಿ. ಬಿನು ಮತ್ತಿತರರು ಭಾಗವಹಿಸಿದ್ದರು.

ಮಾಸ್ಟರ್ ಪ್ಲಾನ್‍ನ ಭಾಗವಾಗಿರುವ ನಾಲ್ಕು ಅಂತಸ್ತಿನ ಕಟ್ಟಡವನ್ನು 137 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ನೆಲ ಮಹಡಿಯಲ್ಲಿ ಸ್ವಾಗತ ಪ್ರದೇಶ, ಆಘಾತ ಆರೈಕೆ, ಜನರಲ್ ಒ.ಪಿ., ಎ, ಆರ್, ವಿ ಕ್ಲಿನಿಕ್, ಫಾರ್ಮಸಿ, ಎರಡನೇ ಮಹಡಿಯಲ್ಲಿ ತೀವ್ರ ನಿಗಾ ವಾರ್ಡ್‍ಗಳು, ಸೆಮಿನಾರ್ ಕೊಠಡಿ, ಇ-ಹೆಲ್ತ್ ಮತ್ತು ಭೂಮಿಕಾ ಕ್ಲಿನಿಕ್ ಇರುತ್ತದೆ, ಮೂರನೇ ಮಹಡಿಯಲ್ಲಿ ಪ್ರಯೋಗಾಲಯ, ರಕ್ತ ಬ್ಯಾಂಕ್, ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ಒ.ಪಿ. ಇರುತ್ತದೆ ಮತ್ತು ನಾಲ್ಕನೇ ಮಹಡಿಯಲ್ಲಿ ಕಿಮೊಥೆರಪಿ ವಾರ್ಡ್, ಆಪರೇಷನ್ ಥಿಯೇಟರ್ ಮತ್ತು ದಂತ ಒ.ಪಿ ಇರುತ್ತದೆ.

ಇವುಗಳ ಜೊತೆಗೆ, ಎ.ಸಿ. ಪ್ಲಾಂಟ್, ವೈದ್ಯಕೀಯ ಅನಿಲ ಘಟಕ ಮತ್ತು ಲಾಂಡ್ರಿ ಸೇರಿದಂತೆ ಸೇವಾ ಬ್ಲಾಕ್ ಅನ್ನು ಸ್ಥಾಪಿಸಲಾಗುವುದು. ಕಟ್ಟಡ ಸಂಕೀರ್ಣದಲ್ಲಿ ಹತ್ತು ಲಿಫ್ಟ್‍ಗಳನ್ನು ಸಹ ಸೇರಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries