ರಾಜ್ಗಿರ್: ನಳಂದಾ ವಿಶ್ವವಿದ್ಯಾಲಯದ ಪುನಶ್ಚೇತನವು ಅದರ ವೈಭವವನ್ನು ಮರುಸ್ಥಾಪಿಸುವ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಬದ್ಧತೆಯ ಸಂಕೇತ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದರು.
ಇಲ್ಲಿನ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 'ಪುರಾತನ ನಳಂದಾ ವಿಶ್ವವಿದ್ಯಾಲಯವು 8ನೇ ಶತಮಾನದಲ್ಲಿ ಜ್ಞಾನಾರ್ಜನೆಯ ಶ್ರೇಷ್ಠ ಕೇಂದ್ರ ಎಂಬ ಸ್ಥಾನ ಪಡೆದಿತ್ತು.
ಇದರ ಅಳಿವು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಆದ ನಷ್ಟ ಎಂದು ಅವರು ಹೇಳಿದರು.
ಪ್ರಸಕ್ತ ವರ್ಷ ಪದವಿ ಪೂರ್ಣಗೊಳಿಸಿದ ಅರ್ಧದಷ್ಟು ವಿದ್ಯಾರ್ಥಿಗಳು ಸುಮಾರು 30 ದೇಶದವರು ಎಂದು ಸಂತೋಷ ವ್ಯಕ್ತಪಡಿಸಿದರು.
ಘಟಿಕೋತ್ಸವಕ್ಕೂ ಮುನ್ನ ಗಿಡ ನೆಡುವ ಅಭಿಯಾನದಲ್ಲಿ ಭಾಗಿಯಾಗಿದರು.

