ತ್ರಿಶೂರ್: ಪರಮೇಕ್ಕಾವು ಮತ್ತು ತಿರುವಂಬಾಡಿ ದೇವಸ್ವಂ ಮಂಡಳಿಗಳು ತ್ರಿಶೂರ್ ಪೂರಂ ಆಚರಣೆಯನ್ನು ಪಟಾಕಿಗಳಿಲ್ಲದೆ ಶಾಸ್ತ್ರೋಕ್ತವಾಗಿ ನಡೆಸಲು ಮನಮಾಡಿದೆ ಎಂದು ತಿಳಿದುಬಂದಿದೆ. ಧಾರ್ಮಿಕ ವಿಧಿವಿಧಾನಗಳು ಮತ್ತು ಛತ್ರಿ ಬದಲಾವಣೆಗಳನ್ನು ನಡೆಸಲಾಗುವುದು ಎಂದು ಒಪ್ಪಿಕೊಳ್ಳಲಾಗಿದೆ. ಇಂದು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಜಿಲ್ಲಾಡಳಿತ ಮತ್ತು ಸಚಿವರಿಗೆ ತಿಳಿಸಲಾಗುವುದು.
ತಿಂಗಳ ಹಿಂದೆ ಪ್ರಾರಂಭವಾದ ಸಿದ್ಧತೆಗಳು ಅಪೂರ್ಣವಾಗಿ ಬಿಡುವುದು ಸರಿಯಲ್ಲ ಎಂಬ ಸಾರ್ವಜನಿಕ ಭಾವನೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. Àರಮೇಕ್ಕಾವು ದೇವಸ್ವಂ ಕಾರ್ಯದರ್ಶಿ ಜಿ ರಾಜೇಶ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಿರುವಾಂಬಾಡಿ ದೇವಸ್ವಂ ಕೂಡಾ ಪೂರಂ ಆಚರಣೆಯನ್ನು ಶಾಸ್ತ್ರೋಕ್ತವಾಗಿ ನಡೆಸಬೇಕೆಂದು ತಿಳಿಸಿದೆ. 24 ರವರೆಗೆ ಶೋಕಾಚರಣೆ ಆಚರಿಸಿ ನಂತರ ಪೂರಂ ನಡೆಸುವುದು ತಿರುವಂಬಾಡಿ ದೇವಸ್ವಂ ನಿಲುವು.
ಇಂದು ನಡೆಯಲಿರುವ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗುವುದು. ಬಳಿಕ ಎರಡೂ ದೇವಸ್ವಂಗಳು ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿವೆ.
ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಸಚಿವರು ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಾಗುವುದು. ತ್ರಿಶೂರ್ ಕಲೆಕ್ಟರೇಟ್ ನಲ್ಲಿ ಸಭೆ ನಡೆಯಲಿದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಮುಂದುವರಿಯಲು ಸಿದ್ಧ ಎಂದು ಪರಮೇಕ್ಕಾವು ದೇವಸ್ವಂ ಪ್ರತಿನಿಧಿಗಳು ತಿಳಿಸಿದ್ದಾರೆ.
ಪೂರಂಗಾಗಿ ತಿರುವಂಬಾಡಿ ವಿಭಾಗಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದ ಮುಂಡತ್ತಿಕೊಟ್ಟೆ ಕಾರ್ಖಾನೆಯಲ್ಲಿ ಮೊನ್ನೆ ಭಾರಿ ಸ್ಫೋಟ ಸಂಭವಿಸಿ 14 ಜನರು ಸಾವನ್ನಪ್ಪಿದ್ದಾರೆ. 12 ಜನರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಐವರು ಶೇಕಡಾ 70 ಕ್ಕೂ ಹೆಚ್ಚು ಸುಟ್ಟಗಾಯಗಳನ್ನು ಹೊಂದಿದ್ದಾರೆ. ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾದ ಸರಣಿ ಸ್ಫೋಟಗಳು ಎರಡು ಗಂಟೆಗಳ ಕಾಲ ಮುಂದುವರಿದಿದ್ದವು.

