ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಕಾರ್ಯಕ್ರಮದಡಿಯಲ್ಲಿ ಮಾಡತ್ತಡ್ಕ ಕಾರ್ಯಕ್ಷೇತ್ರದ ಶ್ರೀ ವಿನಾಯಕ ತಂಡದ ಸದಸ್ಯರಾದ ಭಾಗೀರಥಿಯವರು ಪಾಶ್ಶ್ರ್ವವಾಯು ಪೀಡಿತರಾಗಿ ಚಿಕಿತ್ಸೆ ಪಡೆದಿದ್ದು ಈ ಸಂಬಂಧ ಮಂಜೂರಾದ ಸುರಕ್ಷಾ ಅರೋಗ್ಯ ವಿಮಾ ಮೊತ್ತ 60000 ರೂ.ವನ್ನು ಅವರ ಪುತ್ರಿ ಕು. ಕವಿತಾ ಅವರಿಗೆ ತಾಲೂಕು ಯೋಜನಾಧಿಕಾರಿ ದಿನೇಶ್ ಬಿ. ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ, ವಿದ್ಯಾಗಿರಿ ಒಕ್ಕೂಟ ಅಧ್ಯಕ್ಷ ತಾರಾನಾಥ್ ಶೆಟ್ಟಿ, ಮಾಡತಡ್ಕ ಒಕ್ಕೂಟ ಕಾರ್ಯದರ್ಶಿ ಬೇಬಿ ಶಾಲಿನಿ, ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಓ ಹವಲ್ದಾರ್, ಸೇವಾಪ್ರತಿನಿಧಿ ಜಲಜಾಕ್ಷಿ ಹಾಗೂ ಶ್ರೀವಿನಾಯಕ ಹಾಗೂ ತಸ್ಮೈಶ್ರೀ ತಂಡದ ಸದಸ್ಯರು ಉಪಸ್ಥಿತರಿದ್ದರು.

.jpg)
