ಕಾಸರಗೋಡು: ಕೊಳವೆ ಬಾವಿ ತೋಡಲು ಪೈಪ್ ಇಳಿಸುತ್ತಿದ್ದ ಜೀಪು ಹಿಂದಕ್ಕೆ ಸಾಗಿ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ. ತಮಿಳುನಾಡಿನ ನಾಮಕ್ಕಲ್ ಸೀತಾರಾಮ ಪಾಳಯಂ ಮಾಂಕುಟ್ಟಿ ಪಾಳಯದ ರಾಜಗೋಪಾಲನ್ ಎಂಬವರ ಪುತ್ರ ಮುರಳಿ ರಾಜಗೋಪಾಲ್ (40) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 11 ಗಂಟೆ ವೇಳೆ ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಣಾಟಿಕಲವಲ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಕೊಳವೆಬಾವಿ ತೋಡಲಿರುವ ಪೈಪುಗಳನ್ನು ಜೀಪಿನಲ್ಲಿ ಸ್ಥಳಕ್ಕೆ ತಲುಪಿಸಲಾಗಿತ್ತು. ಇಳಿಜಾರು ಸ್ಥಳದಲ್ಲಿ ಜೀಪು ನಿಲ್ಲಿಸಿ ಪೈಪುಗಳನ್ನು ಇಳಿಸುತ್ತಿದ್ದ ವೇಳೆ ಹಿಂದಕ್ಕೆ ಚಲಿಸಿದ ಜೀಪು ಮುರಳಿರಾಜಗೋಪಾಲ್ರ ದೇಹದ ಮೇಲೆ ಚಲಿಸಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ.
ಘಟನೆಗೆ ಸಂಬಂಧಿಸಿ ಚಿಟ್ಟಾರಿಕ್ಕಲ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


