ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಇವರ ನೇಮಕಾತಿಯನ್ನು ಅನುಮೋದಿಸಿದ ನಂತರ ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚದೇವ್ ಮತ್ತು ಅರುಣ್ ಪಲ್ಲಿ ಅವರೊಂದಿಗೆ ಹಿರಿಯ ವಕೀಲೆ ವಿ. ಮೋಹನಾ ಅವರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೇ 22 ಮತ್ತು 27ರಂದು ನಡೆದ ಸಭೆಗಳಲ್ಲಿ ಕೊಲೀಜಿಯಂ ನೀಡಿದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರಕಾರ ಸೋಮವಾರ ನಾಲ್ಕು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲೆ ಮೋಹನಾ ಅವರನ್ನು ಸುಪ್ರೀಂಕೋರ್ಟ್ಗೆ ಪದೋನ್ನತಿಗೊಳಿಸಲು ಅನುಮೋದನೆ ನೀಡಿತ್ತು.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪೋಸ್ಟ್ ಒಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಜೊತೆಗಿನ ಸಮಾಲೋಚನೆಯ ನಂತರ ಗೌರವಾನ್ವಿತ ರಾಷ್ಟ್ರಪತಿಗಳು ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚದೇವ್ ಮತ್ತು ಅರುಣ್ ಪಲ್ಲಿ ಅವರೊಂದಿಗೆ ಹಿರಿಯ ವಕೀಲೆ ವಿ. ಮೋಹನಾ ಅವರನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ ಎಂದಿದ್ದಾರೆ.

