HEALTH TIPS

ಎನ್.ಡಿ.ಆರ್.ಎಫ್. ನಾಲ್ಕನೇ ಬೆಟಾಲಿಯನ್‍ನಿಂದ ಎಸ್‍ಪಿಸಿ ಕೆಡೆಟ್ ಮುಹಮ್ಮದ್ ಸಹಲ್ ಶಹಜಾದ್ ಗೆ ಸನ್ಮಾನ

ಕಾಸರಗೋಡು: ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಮತ್ತು ಎಸ್‍ಪಿಸಿ ಕೆಡೆಟ್ ಮುಹಮ್ಮದ್ ಸಹಲ್ ಶಹಜಾದ್ ಅವರನ್ನು ಎನ್‍ಡಿಆರ್‍ಎಫ್ (ಅರಕ್ಕೋಣಂ) ನಾಲ್ಕನೇ ಬೆಟಾಲಿಯನ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸನ್ಮಾನಿಸಿತು. 


ಕಳೆದ ವರ್ಷ ಜೀವ ಉಳಿಸುವ ಕಾರ್ಯಕ್ಕಾಗಿ ಶಹಜಾದ್ ಅವರನ್ನು ಸನ್ಮಾನಿಸಲು ಈ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೆಲವು ದಿನಗಳ ಹಿಂದೆ ಎನ್‍ಡಿಆರ್‍ಎಫ್ ಶಾಲೆಯಲ್ಲಿ ನಡೆಸಲಾದ ತರಬೇತಿಯ ಸಮಯದಲ್ಲಿ ಪಡೆದ ಜ್ಞಾನವನ್ನು ಬಳಸಿಕೊಂಡು ಗಂಟಲಿನಲ್ಲಿ ಆಹಾರ ಸಿಲುಕಿಕೊಂಡ ಕಾರಣ ಉಸಿರಾಟದ ತೊಂದರೆ ಅನುಭವಿಸಿದ ಸಹಪಾಠಿಗೆ ಪ್ರಥಮ ಚಿಕಿತ್ಸೆ ನೀಡಿದ್ದಕ್ಕಾಗಿ ಬಾಲಕನನ್ನು ಸನ್ಮಾನಿಸಲಾಯಿತು. 

ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಬಾಲಕನಿಗೆ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ನಾಲ್ಕನೇ ಬೆಟಾಲಿಯನ್ ಕಮಾಂಡೆಂಟ್ ಶೈಲೇಂದ್ರ ಸಿಂಗ್ ರಾಥೋಡ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಹೊಸದುರ್ಗ ತಹಶೀಲ್ದಾರ್ ಕೆ. ರಮೇಶಣ್, ಶಾಲಾ ಪ್ರಾಂಶುಪಾಲ ಡಾ. ಎನ್. ವೇಣುನಾಥನ್, ಎಸ್‍ಪಿಸಿ ಸಿಪಿಒ ತುಷಾರ. ಎಂ ಶ್ರೀಜಿತ್ ಪಿ.ವಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪಿ. ಸುಮಾ ಸ್ವಾಗತಿಸಿದರು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಉಪ ಕಮಾಂಡೆಂಟ್ ಪ್ರವೀಣ್ ಎಸ್. ಪ್ರಸಾದ್ ವಂದಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries