ಕಣ್ಣೂರು: ಕಣ್ಣೂರು ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಪಯ್ಯನ್ನೂರಿನ ಒಂದೂವರೆ ವರ್ಷದ ಬಾಲಕನ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆಯಾಗಿದೆ.
ಅರಿವಳಿಕೆ ನೀಡಿದ ನಂತರ ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಿದೆ. ಮಗುವಿನ ಸಾವಿನ ತನಿಖೆಗಾಗಿ ಶೀಘ್ರದಲ್ಲೇ ವೈದ್ಯಕೀಯ ಮಂಡಳಿಯನ್ನು ರಚಿಸಲಾಗುವುದು ಎಂದು ವರದಿಯಾಗಿದೆ.
ಸಾವಿಗೆ ಕಾರಣ ಅರಿವಳಿಕೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅರಿವಳಿಕೆ ನೀಡಿದ ನಂತರ ಮಗುವಿನ ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಅದು ಕ್ರಮೇಣ ಸಾವಿಗೆ ಕಾರಣವಾಯಿತು ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳುತ್ತದೆ.
ಆಮ್ಲಜನಕ ಪೂರೈಕೆ ಮತ್ತು ರಕ್ತದ ಹರಿವು ನಿಂತ ನಂತರ ಮಗು ಪ್ರಜ್ಞಾಹೀನವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಈ ಹಿಂದೆ ಸಂಬಂಧಿಕರಿಗೆ ತಿಳಿಸಿದ್ದರು. ಅರಿವಳಿಕೆಯ ಪ್ರಮಾಣ ಮತ್ತು ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಎಂಬ ವರದಿಗಳು ಸಹ ಅಗತ್ಯವಿದೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ಪೋಲೀಸರು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಆದೇಶಿಸಿದ್ದಾರೆ.
ವೈದ್ಯಕೀಯ ದುಷ್ಕøತ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವೈದ್ಯಕೀಯ ಮಂಡಳಿಯ ತನಿಖಾ ತಂಡದ ವರದಿ ಬಿಡುಗಡೆಯಾದಾಗ ಮಾತ್ರ ಹೆಚ್ಚಿನ ಸ್ಪಷ್ಟತೆ ಲಭ್ಯವಾಗುತ್ತದೆ.

