ಕಣ್ಣೂರು: ಪಯ್ಯನ್ನೂರು ಶಾಸಕ ವಿ. ಕುಂಞÂ ಕೃಷ್ಣನ್ ಅವರ ಚುನಾವಣಾ ಗೆಲುವನ್ನು ರದ್ದುಗೊಳಿಸುವಂತೆ ಟಿ.ಐ. ಮಧುಸೂಧನನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತದಾರರನ್ನು ದಾರಿ ತಪ್ಪಿಸುವ ಮೂಲಕ ವಿ. ಕುಂಞÂಕೃಷ್ಣನ್ ಗೆಲುವು ಗಳಿಸಿದ್ದರು.
ಹುತಾತ್ಮರ ನಿಧಿ ಕಳ್ಳ ಎಂದು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ, ಆರೋಪಕ್ಕೆ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲ, ಆದರೆ ಕುಂಞÂ ಕೃಷ್ಣನ್ ಸುಳ್ಳು ಪ್ರಚಾರ ನಡೆಸುವ ಮೂಲಕ ತನ್ನನ್ನು ಪರಾಭವಗೊಳಿಸಿದರು. ತಮ್ಮ ಪ್ರಚಾರ ಭಾಷಣಗಳಲ್ಲಿ ತಾವು ಕಳಂಕಿತರಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಮತದಾರರನ್ನು ದಾರಿ ತಪ್ಪಿಸುವ ಮೂಲಕ ಈ ಅಭಿಯಾನ ನಡೆಸಲಾಗಿದೆ ಎಂದು ಮಧುಸೂಧನನ್ ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ಅರ್ಜಿಯನ್ನು ಸರಿಪಡಿಸಲು ನ್ಯಾಯಾಲಯ ಆದೇಶಿಸಿದೆ. ಅರ್ಜಿಯನ್ನು ಮುಂದಿನ ವಾರ ಮತ್ತೆ ಪರಿಗಣಿಸಲಾಗುವುದು. ಅರ್ಜಿಯಲ್ಲಿ ದೋಷಗಳಿರುವುದರಿಂದ ಅರ್ಜಿಯನ್ನು ಮತ್ತೆ ಸಲ್ಲಿಸಲು ಕೋರಲಾಗಿದೆ.

