ಕಾಸರಗೋಡು: ಸಮಸ್ತ ಪ್ರಧಾನ ಕಾರ್ಯದರ್ಶಿ ಹಾಗೂ ಕಾಸರಗೋಡು ಸಂಯುಕ್ತ ಖಾಝಿ ಪೆÇ್ರ. ಕೆ. ಆಲಿಕುಟ್ಟಿ ಮುಸ್ಲಿಯಾರ್ (81)ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಲ್ಲಿ ನಿಧನರಾದರು.ಮಲಪ್ಪುರಂ ಜಿಲ್ಲೆಯ ಇರುಂಬುಯಿಕೋಟ ಎಂಬಲ್ಲಿ 1945 ರಲ್ಲಿ ಜನಿಸಿದ್ದರು. ವಯೋ ಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ಇವರನ್ನು ಪೆರಿಂದಲ್ಮಣ್ಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚೇರುಶ್ಶೇರಿ ಜೈನುದ್ದೀನ್ ಮುಸ್ಲಿಯಾರ್ ಅವರ ನಿಧನದ ನಂತರ 2016 ಫೆ. 27 ರಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಯಾಗಿ ಪೆÇ್ರ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಅವರು ನಿಯುಕ್ತರಾಗಿದ್ದರು. ಅಖಿಲ ಭಾರತೀಯ ಮುಸ್ಲಿಂ ಪರ್ಸನಲ್ ಲಾ ಮಂಡಳಿಯಲ್ಲಿ ಅವರು ಸದಸ್ಯರಾಗಿದ್ದರು. 2013 ರಿಂದ ಕಾಸರಗೋಡು ಸಂಯುಕ್ತ ಮುಸ್ಲಿ ಜಮಾಯತ್ ಖಾಝಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಮತೀಯ, ಸೈದ್ಧಾಂತಿಕ ಮುಖಂಡರಾಗಿದ್ದ ಅವರ ನಿಧನಕ್ಕೆ ರಾಜ್ಯ ಮುಖ್ಯಮಂತ್ರಿ ವಿ.ಡಿ ಸತೀಶನ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.


