HEALTH TIPS

ಓಣಂ ವಾರಾಚರಣೆ ವರ್ಣ ರಂಜಿತ ದೃಶ್ಯಗಳೊಂದಿಗೆ ಮುಕ್ತಾಯ: ವಂದೇ ಮಾತರಂ ಪೂರ್ಣ ಗಾಯನ

ತಿರುವನಂತಪುರಂ: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಓಣಂ ವಾರಾಚರಣೆಗಳ ಸಮಾರೋಪವನ್ನು ಗುರುತಿಸುವ ವರ್ಣರಂಜಿತ ಸಾಂಸ್ಕøತಿಕ ಮೆರವಣಿಗೆ ರಾಜಧಾನಿ ನಗರದಲ್ಲಿ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಮುಖ್ಯಮಂತ್ರಿ ವಿ.ಡಿ. ಸತೀಶನ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಸ್ಪೀಕರ್ ತಿರುವಾಂಜೂರ್ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಂಜೆ 5 ಗಂಟೆಗೆ ಲೋಕ ಭವನದ ಬಳಿಯಿಂದ ಮೆರವಣಿಗೆಗೆ ಚಾಲನೆ ನೀಡಿದರು.


ಮಂತ್ರಿಗಳಾದ ಪಿ.ಸಿ. ವಿಷ್ಣುನಾಥ್, ಟಿ. ಸಿದ್ದಿಕ್, ಶಾಸಕ ಚಾಂಡಿ ಉಮ್ಮನ್, ಚಲನಚಿತ್ರ ನಟ ಆಸಿಫ್ ಅಲಿ, ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು, ವಿದೇಶಿ ಪ್ರವಾಸಿಗರು, ಪತ್ರಕರ್ತರು ಮತ್ತು ಇತರರು ಸಮಾರೋಪ ಮೆರವಣಿಗೆಯಲ್ಲಿ ಪಾಲ್ಗೊಂಡರು. 

ಮೆರವಣಿಗೆಯಲ್ಲಿ 69 ಸ್ತಬ್ದಚಿತ್ರ ವಿಭಾಗಳಲ್ಲಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ 99 ಕಲಾ ಪ್ರಕಾರಗಳು ಭಾಗವಹಿಸಿದ್ದವು. ಕೇರಳದ ಪರಂಪರೆ, ಸಂಸ್ಕೃತಿ, ಅಭಿವೃದ್ಧಿ, ಮಹಿಳಾ ಸಬಲೀಕರಣ, ಆರೋಗ್ಯ, ವೈಜ್ಞಾನಿಕ ಪ್ರಗತಿ ಮುಂತಾದ ವಿವಿಧ ವಿಷಯಗಳನ್ನು ಸ್ತಬ್ದಚಿತ್ರಗಳಿದ್ದವು.

ಕೇರಳದ ವಿಶಿಷ್ಟ ಕಲಾ ಪ್ರಕಾರಗಳ ಜೊತೆಗೆ, ವಿವಿಧ ರಾಜ್ಯಗಳ ಕಲಾ ಪ್ರದರ್ಶನಗಳನ್ನು ಸಹ ಮೆರವಣಿಗೆಯಲ್ಲಿ ಸೇರಿಸಲಾಯಿತು. ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ಕಲಾ ಪ್ರಕಾರಗಳು ಮತ್ತು ಸ್ಥಳೀಯ ಕಲಾ ಗುಂಪುಗಳ ಪ್ರದರ್ಶನಗಳನ್ನು ಪ್ರದರ್ಶಿಸಲಾಯಿತು. ಸ್ಕೇಟಿಂಗ್ ಸದಸ್ಯರ ಪ್ರದರ್ಶನಗಳು ಮತ್ತು ಥೆಯ್ಯಂ, ಕಲರಿಪಯಟ್ಟು, ಚೆಂಡಮೇಳಂ, ಬ್ಯಾಂಡ್ ಮೇಳಂ, ಅಶ್ವರೋದ ಸೇನಾ ಮಾರ್ಚ್ ಮತ್ತು ರೋಲರ್ ಸ್ಕೇಟಿಂಗ್‍ನಂತಹ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು. ಹಸಿರು ಶಿಷ್ಟಾಚಾರವನ್ನು ಅನುಸರಿಸಿ ಪರಿಸರ ಸ್ನೇಹಿ ರೀತಿಯಲ್ಲಿ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.

ವಂದೇ ಮಾತರಂ ಪೂರ್ಣ ಗಾಯನ: 

ಓಣಂ ವಾರಾಚರಣೆಯ ಸಮಾರೋಪ ಸಮಾರಂಭದಲ್ಲಿ ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡಲಾಯಿತು. ಉಪರಾಷ್ಟ್ರಪತಿಗಳ ಶಿಷ್ಟಾಚಾರದ ಪ್ರಕಾರ ಅದನ್ನು ಹಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಚಿವ ಪಿ.ಸಿ. ವಿಷ್ಣುನಾಥ್ ಸ್ಪಷ್ಟಪಡಿಸಿದರು. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈ ಬಾರಿ ಲೋಕ ಭವನದ ಮುಂದೆ ಧ್ವಜಾರೋಹಣ ನಡೆಯಿತು.

ಏತನ್ಮಧ್ಯೆ, ಕಂದಾಯ ಸಚಿವ ಎ.ಪಿ. ಅನಿಲ್‍ಕುಮಾರ್ ಅವರು ಓಣಂ ವಾರಾಚರಣೆಯ ಸಮಾರೋಪದಲ್ಲಿ ಸಂಪೂರ್ಣ ವಂದೇ ಮಾತರಂ ಹಾಡುವ ಬಗ್ಗೆ ವಿವರಗಳು ತಿಳಿದಿಲ್ಲ ಎಂದು ಹೇಳಿದರು. ವಂದೇ ಮಾತರಂ ಬಗ್ಗೆ ಸರ್ಕಾರ ಇನ್ನೂ ತನ್ನ ಹಿಂದಿನ ನಿಲುವನ್ನು ಹೊಂದಿದೆ. ಅದು ಕಾಂಗ್ರೆಸ್‍ನ ರಾಷ್ಟ್ರೀಯ ನಿಲುವು ಎಂದು ಅವರು ಹೇಳಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries