ತಿರುವನಂತಪುರಂ: ಕೆ.ಎಸ್.ಆರ್.ಟಿ.ಸಿ. ಡಿಜಿಟಲ್ ಪ್ರಯಾಣ ಸೇವೆಗಳಲ್ಲಿ ಹೊಸ ಹೆಜ್ಜೆ ಇಡುತ್ತಿದೆ. ಪ್ರಯಾಣಿಕರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲು ಎಐ ವಾಟ್ಸಾಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.
ಈ ಯೋಜನೆಯ ಉದ್ಘಾಟನೆಯನ್ನು ತಿರುವನಂತಪುರಂನ ಮಸ್ಕತ್ ಹೋಟೆಲ್ನ ಸಿಂಫನಿ ಹಾಲ್ನಲ್ಲಿ ಸಾರಿಗೆ ಸಚಿವ ಸಿ ಪಿ ಜಾನ್ ಅವರು ಬೆಳಿಗ್ಗೆ ನಿರ್ವಹಿಸಿದರು.
ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕೆ.ಎಸ್.ಆರ್.ಟಿ.ಸಿ. ಘಟಕದ ಪ್ರಶಸ್ತಿ ಪ್ರದಾನ, ಕೆ.ಎಸ್.ಆರ್.ಟಿ.ಸಿ.ಯ 24*7 ಗ್ರಾಹಕ ಸೇವಾ ಟೋಲ್ ಫ್ರೀ (149) ಸೇವೆಯ ಉದ್ಘಾಟನೆ ಮತ್ತು ಪರಿಷ್ಕೃತ ಕೆಎಸ್ಆರ್ಟಿಸಿ ಕೊರಿಯರ್ ವ್ಯವಸ್ಥೆಯ ಉದ್ಘಾಟನೆಯನ್ನು ಸಾರಿಗೆ ಸಚಿವರು ನೆರವೇರಿಸಿದರು.

