ಕಾಸರಗೋಡು: ಮಾದಕ ದ್ರವ್ಯ ಎಂಡಿಎಂಎ ಕೈವಶವಿರಿಸಿದ ಪ್ರಕರಣದ ಅಪರಾಧಿ, ಚೆರ್ಕಳ ಮಟ್ಟತ್ತೋಡಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿರುವ ಅಬ್ಬಾಸ್ ಸಿ (41) ಎಂಬಾತನಿಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿನಾಯಕ ರಾವ್ ಆರ್ ಅವರು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸಬೇಕಾಗಿದೆ.
2020 ಸೆಪ್ಟೆಂಬರ್ 26ರಂದು ರಾತ್ರಿ ಚೆರ್ಕಳದಲ್ಲಿ ಅಂದು ವಿದ್ಯಾನಗರ ಪೆÇಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದ ವಿನು ಪ್ರಸಾದ್ ನೇತೃತ್ವದ ಪೆÇಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 4 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ಈತನನ್ನು ಬಂಧಿಸಲಾಗಿತ್ತು.


