HEALTH TIPS

ಭಾರೀ ಮಳೆ: ನಾಳೆ(ಸೋಮವಾರ) ಕಾಸರಗೋಡಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ಭಾರೀ ಮಳೆ ಮುಂದುವರಿದಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ (ಆಗಸ್ಟ್ 3, 2026) ಕಾಸರಗೋಡು ಜಿಲ್ಲೆಯ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ರಜೆ ಘೋಷಿಸಿದ್ದಾರೆ. 




ರಜೆ ಅನ್ವಯಿಸುವ ಸಂಸ್ಥೆಗಳು

ಕಾಲೇಜುಗಳು, ವೃತ್ತಿಪರ ಕಾಲೇಜುಗಳು, ಶಾಲೆಗಳು, ಅಂಗನವಾಡಿಗಳು, ಬೋಧನಾ ಕೇಂದ್ರಗಳು, ಐಸಿಎಸ್‍ಇ ಮತ್ತು ಸಿಬಿಎಸ್‍ಇ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯಿಸುತ್ತದೆ. ಮದರಸಾಗಳು ಸೇರಿದಂತೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೂ ರಜೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪೂರ್ವ ನಿಗದಿಯಾಗಿದ್ದ ವಿಶ್ವವಿದ್ಯಾಲಯ ಪರೀಕ್ಷೆಗಳು, ಪಬ್ಲಿಕ್ ಪರೀಕ್ಷೆಗಳು ಅಥವಾ ಸಂದರ್ಶನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರಸ್ತುತ ಆರು ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ವೆಳ್ಳರಿಕುಂಡು ತಾಲ್ಲೂಕಿನಲ್ಲಿ ಮೂರು ಶಿಬಿರಗಳು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಮೂರು ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ, 88 ಕುಟುಂಬಗಳ 325 ಜನರನ್ನು ಸುರಕ್ಷಿತವಾಗಿ ಈ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ 132 ಪುರುಷರು, 143 ಮಹಿಳೆಯರು ಮತ್ತು 50 ಮಕ್ಕಳು ಸೇರಿದ್ದಾರೆ.

ಪಲವಾಯಲ್, ಕಿನಾನೂರು ಕರಿಂದಳ, ಪೆರೋಲ್ ಮತ್ತು ಕ್ಲೈಕೋಡ್ ಗ್ರಾಮಗಳಲ್ಲಿ ಶಿಬಿರಗಳನ್ನು ತೆರೆಯಲಾಗಿದೆ. ತಯೇನಿ ಸರ್ಕಾರಿ ಪ್ರೌಢಶಾಲೆ, ದೇಶಸೇವಾನಿ ಗ್ರಂಥಾಲಯ, ಚುಳ್ಳಿಕ್ಕರ ಎಲ್‍ಪಿ ಶಾಲೆ, ಚಾತಮಠ ದೇವಸ್ಥಾನ ಸಭಾಂಗಣ, ಕ್ಲೈಕೋಡ್ ನಾಯನಾರ್ ಮಂದಿರಂ ಮತ್ತು ವೆಲ್ಲಾಟ್ ಜಿಎಲ್‍ಪಿಎಸ್‍ಗಳಲ್ಲಿ ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ.


ಮಳೆ ಎಚ್ಚರಿಕೆಗಳು ಮತ್ತು ರಜಾದಿನಗಳ ಕುರಿತು ಈ ಪ್ರಮುಖ ಸುದ್ದಿಯನ್ನು ನಿಮ್ಮ ಸ್ನೇಹಿತರು ಮತ್ತು ವಾಟ್ಸಾಪ್ ಗುಂಪುಗಳೊಂದಿಗೆ ಹಂಚಿಕೊಳ್ಳಿ. ಇತ್ತೀಚಿನ ನವೀಕರಣಗಳಿಗಾಗಿ ನಮ್ಮ ವಾಟ್ಸಾಪ್ ಚಾನಲ್ ಅನ್ನು ಅನುಸರಿಸಿ. ಫೇಸ್‍ಬುಕ್ ಪೆÇೀಸ್ಟ್ ಕೆಳಗೆ ನಿಮ್ಮ ಕಾಮೆಂಟ್‍ಗಳನ್ನು ಮಾಡಿ. 

ನಿರಂತರ ಸುದ್ದಿಗಳಿಗಾಗಿ  SAMARASASUDHI.COM ಸಂದರ್ಶಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries