ಕುಂಬಳೆ: ಕುಂಬಳೆ ಪ್ರೆಸ್ ಪೋರಂ ನೇತೃತ್ವದಲ್ಲಿ 'ಮಾಧ್ಯಮ ಓಣಂ' ಹೆಸರಿನಲ್ಲಿ ಓಣಂ ಆಚರಣೆಯನ್ನು ಭಾನುವಾರ ಆಯೋಜಿಸಲಾಯಿತು. ಪತ್ರಕರ್ತರು ಮತ್ತು ಕುಟುಂಬ ಸದಸ್ಯರ ಸಮಾವೇಶಕ್ಕೆ ವೇದಿಕೆಯಾದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಓಣಂ ಸದ್ಯ(ಆಹಾರ) ತಯಾರಿಸಲಾಗಿತ್ತು.
ಸದಸ್ಯರ ಕುಟುಂಬಗಳ ಮಕ್ಕಳಿಗೆ ಸಂಗೀತ ಕುರ್ಚಿ, ಬಲೂನ್ ಒಡೆಯುವುದು ಮತ್ತು ಓಣಂ ಹಾಡಿನಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೆಸ್ ಪೋರಂ ಸದಸ್ಯರಿಗೆ ಓಣಂ ಉಡುಗೊರೆಗಳನ್ನು ಯುವ ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಓಣಂ ಸಹೋದರತ್ವ ಮತ್ತು ಏಕತೆಯ ಸಂದೇಶವನ್ನು ಹರಡುವ ಹಬ್ಬವಾಗಿದ್ದು, ಇಂತಹ ಕೂಟಗಳು ಸಮುದಾಯದಲ್ಲಿ ಸ್ನೇಹವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.
ಪ್ರೆಸ್ ಪೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು.
ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡು, ಕೆ.ಎಂ. ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಝೈನುದ್ದೀನ್ ಅಡ್ಕ ಮತ್ತು ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ ಮಾತನಾಡಿದರು. ಪ್ರೆಸ್ ಪೋರಂ ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕೆ.ಎಂ.ಸತ್ತಾರ್ ವಂದಿಸಿದರು.

.jpg)
.jpg)
.jpg)
