ಕಾಸರಗೋಡು: ನೀಲೇಶ್ವರದ ತೈಕಡಪುರಂನಲ್ಲಿ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಣೆಯಾದ ಯುವಕನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ತೈಕಡಪುರಂ ಸ್ಟೋರ್ ಕವಲ ಎವಿ ಹೌಸ್ನ ಎ.ವಿ. ಅಜ್ಮಲ್ (21) ಎಂದು ಗುರುತಿಸಲಾಗಿದೆ. ತೈಕಡಪುರಂನಿಂದ ಮೀನುಗಾರಿಕೆಗೆ ಹೋಗಿದ್ದ ಗ್ರಾನ್ಮಾ ದೋಣಿಯ ಕೆಲಸಗಾರರು ಸಮುದ್ರದಲ್ಲಿ ಶವ ಪತ್ತೆ ಮಾಡಿದ್ದಾರೆ. ಇಂದು ಬೆಳಿಗ್ಗೆ 6.15 ರ ಸುಮಾರಿಗೆ ಶವ ಪತ್ತೆಯಾಗಿದೆ.
ಕರಾವಳಿ ಪೋಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಪೆÇಲೀಸರ ಸೂಚನೆಯಂತೆ ಕಾರ್ಮಿಕರು ಸ್ವತಃ ಶವವನ್ನು ದಡಕ್ಕೆ ತಂದರು.ಶನಿವಾರ ಸಂಜೆ ಅಜ್ಮಲ್ ಪ್ರವಾಹದಲ್ಲಿ ಸಿಲುಕಿಕೊಂಡರು. ಮೀನುಗಾರಿಕೆ ಮತ್ತು ಕರಾವಳಿ ಪೋಲೀಸರ ರಕ್ಷಣಾ ದೋಣಿಗಳು ತಕ್ಷಣ ಹುಡುಕಾಟ ಆರಂಭಿಸಿದ್ದವು. ಮೂರು ದಿನಗಳ ಹುಡುಕಾಟದ ಹೊರತಾಗಿಯೂ ಶವ ಪತ್ತೆಯಾಗಲಿಲ್ಲ. ಕೋಸ್ಟ್ ಗಾರ್ಡ್ನಿಂದ ಸಹಾಯ ಕೋರಿದ್ದರೂ ಯಾವುದೇ ಸಹಾಯ ಲಭಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

