HEALTH TIPS

ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ತಲಪಾಡಿಗೆ ಸ್ಥಳಾಂತರಿಸಲು ಸಿದ್ಧತೆ

ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನ್ನು ತಲಪಾಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗುತ್ತಿದೆ. ಹಲವಾರು ವರ್ಷಗಳಿಂದ ವಾಮಂಜೂರಿನಲ್ಲಿ ಚೆಕ್ ಪೋಸ್ಟ್ ಕಚೇರಿ ಕಂಟೈನರ್‍ನಲ್ಲಿ ಕಾರ್ಯಾಚರಿಸುತ್ತಿದೆ. ಆದರೆ ಕಚೇರಿಗೆ ಸ್ವಂತ ಕಟ್ಟಡ, ಶೌಚಾಲಯ, ವಾಸಮಾಡಲು ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪರಿಸರದ ಬಾಡಿಗೆ ಕ್ವಾರ್ಟಸ್ರ್ನಲ್ಲಿ ಉದ್ಯೋಗಸ್ಥರು ವಾಸವಾಗಿದ್ದಾರೆ. ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಸ ಸ್ಥಳಕ್ಕೆ ಹೊಸಂಗಡಿ ಮೂಲಕ ಒಂದು ಕಿಲೋ ಮೀಟರ್ ಸುತ್ತುವರಿದು ತೆರಳಬೇಕಾಗುತ್ತಿದೆ. ವಾಹನ ತಪಾಸಣೆ ಹೆದ್ದಾರಿಯಲ್ಲಿಯೇ ನಡೆಸಬೇಕಾಗುತ್ತಿದ್ದು ಹೆದ್ದಾರಿ ಮೂಲಕ ಅಪರಿಮಿತ ವಾಹನ ಸಂಚರಿಸುವ ವೇಳೆ ತಪಾಸಣೆ ಅಪಾಯಕ್ಕೆ ಕಾರಣವಾಗುತ್ತಿದೆ. ತಲಪಾಡಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿಯಲ್ಲಿ ಸ್ವಂತ ಜಾಗವಿದ್ದರೂ ಸ್ವಂತ ಕಟ್ಟಡ ಇನ್ನೂ ಮರೀಚಿಕೆಯಾಗಿದೆ. 


ವಾಮಂಜೂರಿನಲ್ಲಿ ಹೆದ್ದಾರಿಯಲ್ಲಿಯೇ ವಾಹನ ತಪಾಸಣೆಗೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಂದ ತಲಪಾಡಿಯಲ್ಲಿರುವ ಸ್ಥಳದಲ್ಲಿ ಕಂಟೈನರ್ ಮೂಲಕ ಹೊಸ ಕಚೇರಿಗೆ ತಯಾರಿ ನಡೆಸುತ್ತಿದ್ದಾರೆ. ಒಂದು ಕಚೇರಿ ಹಾಗೂ ಇನ್ನೊಂದು ವಿಶ್ರಾಂತಿ ಕೊಠಡಿಯ ಒಟ್ಟು ಎರಡು ಕಂಟೈನರ್‍ನ್ನು ತರಲಾಗಿದೆ. ಇನ್ನು ಕಂಟೈರ್‍ನೊಳಗೆ ಕಚೇರಿಗೆ ಬೇಕಾದ ಕೊಠಡಿಗಳನ್ನು ನಿರ್ಮಿಸುವ ಕಾಮಗಾರಿ ನಡೆಸಬೇಕಾಗಿದೆ. ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಾಹನಗಳ ಮೂಲಕ ವ್ಯಾಪಕ ಎಂ.ಡಿ.ಎಂ.ಎ ಸಹಿತ ವಿವಿಧ ಮಾದಕ ಪದಾರ್ಥ ರವಾನೆಯಾಗುತ್ತಿದ್ದು, ವಾಮಂಜೂರು ಚೆಕ್ ಪೆÇೀಸ್ಟ್ ನಲ್ಲಿ ಹಲವು ಭಾರಿ ವಶಪಡಿಸಲಾಗಿದೆ. ನೂತನ ಕಚೇರಿಯನ್ನು ವಿವಿಧ ಸೌಲಭ್ಯಗಳೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಬೇಕಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries