ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜನಸೇವಾ ವಿಶ್ವಸ್ಥ ನಿಧಿ ಟ್ರಸ್ಟ್ ಹಾಗೂ ಶಾರದಾ ಮಹಿಳಾ ಮಂಡಳಿ ಇವರ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ವೇದಮೂರ್ತಿ ವಿಘ್ನೇಶ್ವರ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಪುಷ್ಪಲತಾ ವಿ. ಕೆ. ಭಟ್ ಗೋಳಿತ್ತಡ್ಕ, ಕಾಸರಗೋಡು ಧಾರ್ಮಿಕ ಉಪನ್ಯಾಸ ನೀಡಿದರು. ಆಶ್ರಮದಲ್ಲಿ ನಿರಂತರವಾಗಿ ಸತ್ಸಂಗ ಸೇವೆಗೈಯುತ್ತಿರುವ ಮಾಲತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾರತಿ ಸ್ವಾಗತಿಸಿ, ಪ್ರಧಾನ ಕಾಯ9ದರ್ಶಿ ರಮೇಶ್ ಕಳೇರಿ ವಂದಿಸಿದರು.

.jpg)
