ತಿರುವನಂತಪುರಂ: ಪೋಲೀಸ್ ಪಡೆಗಳ ಶಕ್ತಿ, ದಕ್ಷತೆ ಮತ್ತು ಚೈತನ್ಯವನ್ನು ಹೆಚ್ಚಿಸುವಲ್ಲಿ ಪೋಲೀಸ್ ಕ್ರೀಡಾಕೂಟ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದರು.
ಕೇರಳ ಪೋಲೀಸ್ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಅವರು ನೆನಪಿಸಿದರು. ಚಂದ್ರಶೇಖರನ್ ನಾಯರ್ ಕ್ರೀಡಾಂಗಣದಲ್ಲಿ 47 ನೇ ಕೇರಳ ಪೋಲೀಸ್ ರಾಜ್ಯ ಅಥ್ಲೆಟಿಕ್ ಮತ್ತು ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಪೋಲೀಸ್ ಕೂಟದಲ್ಲಿ ಕೇರಳವನ್ನು ಪ್ರತಿನಿಧಿಸಲು ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ರಾಜ್ಯ ಪೋಲೀಸ್ ಅಥ್ಲೆಟಿಕ್ ಮತ್ತು ಕ್ರೀಡಾಕೂಟ ವೇದಿಕೆಯಾಗಿದೆ.
ಪೋಲೀಸ್ ಪಡೆಯ ದೈಹಿಕ ಮತ್ತು ಮಾನಸಿಕ ದಕ್ಷತೆಯು ರಾಜ್ಯದ ಭದ್ರತೆ ಮತ್ತು ಶಾಂತಿಯ ಅಡಿಪಾಯವಾಗಿದೆ. ಆದ್ದರಿಂದ, ಕ್ರೀಡಾ ಸ್ಪರ್ಧೆಗಳನ್ನು ತಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಅವರು ಪೆÇಲೀಸ್ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಮಾದಕ ವ್ಯಸನದ ವಿರುದ್ಧ ಬಿರುಗಾಳಿಯಾಗಿ ಪರಿಣಮಿಸಿರುವ ಆಪರೇಷನ್ ತೂಫಾನ್ ಹಿನ್ನೆಲೆಯಲ್ಲಿ ಈ ವರ್ಷದ ರಾಜ್ಯ ಪೆÇಲೀಸ್ ಕ್ರೀಡಾಕೂಟವನ್ನು 'ಕ್ರೀಡೆಗೆ ಹೌದು, ಮಾದಕ ದ್ರವ್ಯಗಳಿಗೆ ಇಲ್ಲ' ಎಂಬ ಸಂದೇಶದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕ್ರೀಡಾಕೂಟದ ಭಾಗವಾಗಿ ಕಾಸರಗೋಡಿನಿಂದ ಪ್ರಾರಂಭವಾಗಿ ತಿರುವನಂತಪುರಂ ತಲುಪಿದ ಜ್ಯೋತಿಯನ್ನು ಗೃಹ ಸಚಿವರು ಸ್ವೀಕರಿಸಿದರು.
47 ನೇ ಪೋಲೀಸ್ ಕ್ರೀಡಾಕೂಟವು 41 ಘಟಕಗಳ ಪಥಸಂಚಲನದೊಂದಿಗೆ ಪ್ರಾರಂಭವಾಯಿತು. ಸಚಿವರು ಪಥಸಂಚಲನ ಗೌರವ ವಂದನೆ ನೀಡಿದರು. ರಾಜ್ಯ ಪೋಲೀಸ್ ಮುಖ್ಯಸ್ಥ ರಾವಡ ಆಜಾದ್ ಚಂದ್ರ ಶೇಖರ್ ಸ್ವಾಗತಿಸಿದರು.
ಡಿಜಿಪಿ ಮತ್ತು ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ, ಸಶಸ್ತ್ರ ಪೋಲೀಸ್ ಬೆಟಾಲಿಯನ್ ಎಡಿಜಿಪಿ ಬಲರಾಮ್ ಕುಮಾರ್ ಉಪಾಧ್ಯಾಯ, ಗುಪ್ತಚರ ಎಡಿಜಿಪಿ ದಿನೇಂದ್ರ ಕಶ್ಯಪ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪಿ. ವಿಜಯನ್, ಸಂಘಟನಾ ಸಮಿತಿಯ ಕಾರ್ಯದರ್ಶಿ ಮತ್ತು ಪೋಲೀಸ್ ಪ್ರಧಾನ ಕಚೇರಿಯ ಐಜಿ ಹರ್ಷಿತಾ ಅಟ್ಟಲೂರಿ, ಆರ್ಥಿಕ ಅಪರಾಧ ವಿಭಾಗದ ಐಜಿ ಎಸ್. ಅಜಿತಾ ಬೇಗಂ ಮತ್ತು ಇತರ ಹಿರಿಯ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ, ಕಾಟನ್ ಹಿಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಉದ್ಘಾಟನಾ ಸಮಾರಂಭಗಳು ಕೇರಳ ಪೋÇಲೀಸ್ ಬ್ಯಾಂಡ್, ನಿರ್ಮಲ ಭವನ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾರ್ಮೆಲ್ ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಬ್ಯಾಂಡ್ ಪ್ರದರ್ಶನದೊಂದಿಗೆ ಮುಕ್ತಾಯಗೊಂಡವು.
ಕ್ರೀಡಾ ಉತ್ಸವವು ಇಂದು ಮತ್ತು ನಾಳೆ (ಸೆಪ್ಟೆಂಬರ್ 9 ಮತ್ತು 10) ಚಂದ್ರಶೇಖರನ್ ನಾಯರ್ ಕ್ರೀಡಾಂಗಣ ಮತ್ತು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಮುಂದುವರಿಯುತ್ತದೆ. 10 ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟಿಸಲಿದ್ದಾರೆ.

