ಕುಂಬಳೆ: ನಿರ್ಗಮಿತ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ಕಚೇರಿಯಿಂದ ಹೊರಡುವ ಮೊದಲು, ಕುಂಬಳೆ ಕೊಯಿಪ್ಪಾಡಿ ಬೀಚ್ನಲ್ಲಿರುವ ಸುನಿಲ್ ಮತ್ತು ಅವರ ಕುಟುಂಬವನ್ನು ಕೊಠಡಿಗೆ ಕರೆಸಿ ಅವರ ವಾಸಯೋಗ್ಯವಲ್ಲದ ಮನೆಗೆ ಬದಲಾಗಿ ಸುರಕ್ಷಿತ ಮನೆ ಲಭಿಸುವ ಭರವಸೆಯೊಂದಿಗೆ ಖಚಿತ ಪಡಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿದರು.
ಕಳೆದ ಮಳೆಗಾಲದಲ್ಲಿ ಸಮುದ್ರ ಕೊರೆತದಿಂದಾಗಿ ಮನೆ ಅಪಾಯದಲ್ಲಿರುವಾಗ ಜಿಲ್ಲಾಧಿಕಾರಿ ಸುನಿಲ್ ಅವರ ಮನೆಗೆ ಭೇಟಿ ನೀಡಿದ್ದರು. ಮನೆಯ ದಯನೀಯ ಸ್ಥಿತಿ, ಕುಟುಂಬ ಸದಸ್ಯ ರಾಜೇಶ್ ಮತ್ತು ಅವರ ಅನಾರೋಗ್ಯ ಪೀಡಿತ ತಾಯಿಯ ಅಂಗವೈಕಲ್ಯವನ್ನು ಕಂಡು ಜಿಲ್ಲಾಧಿಕಾರಿಗಳು ಮೀನುಗಾರಿಕಾ ಇಲಾಖೆಗೆ ಕುಟುಂಬವನ್ನು ಸಾಧ್ಯವಾದಷ್ಟು ಬೇಗ ಸುರಕ್ಷಿತವಾಗಿ ಸ್ಥಳಾಂತರಿಸಲು ನಿರ್ದೇಶನ ನೀಡಿದ್ದರು.
ಈ ಹಿಂದೆ, ಪುನರ್ಹಂ ಯೋಜನೆಯಡಿಯಲ್ಲಿ 10 ಲಕ್ಷ ರೂ. ಪಡೆದಿದ್ದ ಈ ಕುಟುಂಬವು ಕುಂಬಳೆ ನಾರಾಯಣಮಂಗಲದಲ್ಲಿ ನಾಲ್ಕು ಸೆಂಟ್ಸ್ ಭೂಮಿಯನ್ನು ಖರೀದಿಸಿ ಮನೆಯ ನಿರ್ಮಾಣವನ್ನು ಪ್ರಾರಂಭಿಸಿತ್ತು. ಮೀನುಗಾರಿ ವೃತ್ತಿಯವರಾದ ಅವರ ತಾಯಿ ವಿಮಲಾ ಅವರು ಯೋಜನೆಯಡಿಯಲ್ಲಿ 10 ಲಕ್ಷ ರೂ.ಗಳನ್ನು ಪಡೆದರು. ಆದಾಗ್ಯೂ, ಅವರು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ, ಜಿಲ್ಲಾಧಿಕಾರಿಗಳು ಈ ವಿಷಯವನ್ನು ಕೇರಳ ಸಣ್ಣ ಕೈಗಾರಿಕಾ ಸಂಘದ ಗಮನಕ್ಕೆ ತಂದ ಬಳಿಕ, ಮನೆಯನ್ನು ಪೂರ್ಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಪ್ರಸ್ತುತ, ಮನೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಮತ್ತು ವಿದ್ಯುದ್ದೀಕರಣ ಕಾರ್ಯ ನಡೆಯುತ್ತಿದೆ.
ಸುನಿಲ್ ತನ್ನ ಕುಟುಂಬದೊಂದಿಗೆ ಜಿಲ್ಲಾಧಿಕಾರಿಗಳ ಕೊಠಡಿಗೆ ಭೇಟಿ ನೀಡಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಅವರ ಪತ್ನಿ ಬಿಜಿಮೋಳ್, ಕುಂಬಳೆ ಜಿಎಸ್ಬಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳಾದ ಸೂರಜ್ ಮತ್ತು ಸಿದ್ಧಾರ್ಥ್, ಜಿಲ್ಲಾಧಿಕಾರಿಯೊಂದಿಗೆ ನಿಂತು ಅವರೊಂದಿಗೆ ಪೋಟೋ ತೆಗೆಸಿಕೊಂಡರು.
ಮೀನುಗಾರಿಕೆ ಉಪನಿರ್ದೇಶಕ ಸಿ.ಕೆ. ಶೈನಿ, ಕೆಎಸ್ಎಸ್ಐಎ ಜಿಲ್ಲಾಧ್ಯಕ್ಷ ಮುಜೀಬ್ ಅಹ್ಮದ್, ಕಾರ್ಯದರ್ಶಿ ಪ್ರಶಿಷ್ ಕುಮಾರ್ ಎಂ, ಮಾಜಿ ಅಧ್ಯಕ್ಷ ಎಸ್. ರಾಜಾರಾಮ, ಮತ್ತು ಜಿಲ್ಲಾ ಸಮಿತಿ ಸದಸ್ಯ ಅಲಿ ನೆಟ್ಟಾರ್ ಮತ್ತು ಅಶ್ರಫ್ ಮಧೂರು ಕೊಠಡಿಯಲ್ಲಿ ಉಪಸ್ಥಿತರಿದ್ದರು.

.jpeg)
.jpeg)
