ಮುಳ್ಳೇರಿಯ: ಜನಪ್ರಿಯ ವೈದ್ಯ ಹಾಗೂ ಪರಿಸರ ಜೀವವೈವಿಧ್ಯ ಸಂರಕ್ಷಣಾ ಹೋರಾಟಗಾರರಾಗಿದ್ದ ದಿ. ಡಾ. ಸಾಲಿಹ್ ಮುಂಡೋಳ್ ಅವರ ಸ್ಮರಣಾರ್ಥ ನೀಡುವ ಪ್ರಥಮ ಡಾ. ಸಾಲಿಹ್ ಮುಂಡೋಳ್ ಪುರಸ್ಕಾರಕ್ಕೆ ಬೆಳ್ಳೂರು ನಾಟೆಕಲ್ಲಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿದ್ಯಾ ಮೋಹನ್ ದಾಸ್ ರೈ ಆಯ್ಕೆಯಾಗಿದ್ದಾರೆ. 40 ವರ್ಷ ಗಳಿಗೂ ಹೆಚ್ಚು ಕಾಲ ವೈದ್ಯಕೀಯ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ಆಯ್ಕೆಮಾಡಲಾಗಿದೆ. ಪ್ರೊ. ಎಂ.ಎ. ರೆಹಮಾನ್, ಮುಕುಂದನ್ ಪಿ.ಕೆ, ಮೋಹನನ್ ಮಾಂಙಡ್, ಶ್ರೀಜಾ ಪುರುಷೋತ್ತಮನ್, ಅಬ್ದುಲ್ಲ ಕುಂಞÂ ಉದುಮ ಎಂಬವರನ್ನೊಳಗೊಂಡ ಆಯ್ಕೆ ಸಮಿತಿ ಡಾ. ವಿದ್ಯಾ ಮೋಹನ್ ದಾಸ್ ರೈಯವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಪುರಸ್ಕಾರವನ್ನು ಸೆ. 27 ರಂದು ಸಂಜೆ 4ಕ್ಕೆ ಉದುಮ ಪಳ್ಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ಹೋರಾಟಗಾರ ಡಾ. ಸಿ.ಪಿ.ಶಾಜಿ ವಿತರಿಸಲಿದ್ದಾರೆ.


