No title
0
October 02, 2017
ಜಿಲ್ಲಾ ಮಟ್ಟದ ಗೇಮ್ಸ್ ವಿಜೇತೆ
ಉಪ್ಪಳ: ಕಾಲಿಕಡವಿನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಜೂನಿಯರ್ ಹುಡುಗಿಯರ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾಥರ್ಿನಿ ವೈಭವಿ ಕೆ ಆರ್ ಜಯಗಳಿಸಿ ಉತ್ತರ ವಲಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ. ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ಕಾಯರ್ಕಟ್ಟೆ - ಶಿಕ್ಷಕಿ ಮನೋರಮ ದಂಪತಿ ಸುಪುತ್ರಿಯಾದ ವೈಭವಿಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.