HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕೊಡುಗೆ ನೀಡಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಣೆ ಪೆರ್ಲ: ಆಧುನಿಕತೆ ಬೆಳೆದಂತೆಲ್ಲ ಆಚರಣೆ, ಕ್ರಮಗಳು ಪರಂಪರೆಯನ್ನು ಮರೆತು ಪಾಶ್ಚಿಮಾತ್ಯದ ಕುರುಡು ಅನುಕರಣೆಯಲ್ಲಿರುವ ಮಧ್ಯೆ ಇಲ್ಲೊಂದು ಕುಟುಂಬ ತಮ್ಮ ಮಗುವಿನ ಜನ್ಮ ದಿನಾಚರಣೆಯನ್ನು ಎಂಡೊ ಭಾಧಿತ ಮಕ್ಕಳ ವಿಶೇಷ ಬಡ್ಸ್ ಶಾಲೆಗೆ ದಾಸ್ತಾನು ತುಂಬಿಸುವ ಪತ್ತಾಯವನ್ನು ಕೊಡುಗೆಯಾಗಿ ನೀಡಿ ವಿಶಿಷ್ಟತೆ ಮೆರೆದ ಸದಾಶಯದ ಘಟನೆ ಶುಕ್ರವಾರ ಪೆರ್ಲದಲ್ಲಿ ಶ್ಲಾಘನೆಗೊಳಗಾಯಿತು. ಪೆರ್ಲದ ಶಾರ್ಜ ಉದ್ಯೋಗಿ ಸಂತೋಷ್ ಕುಮಾರ್ ಖಂಡಿಗೆ ಮತ್ತು ಡಾ. ಅಕ್ಷತಾ ಎಸ್.ಬಿ ಅವರ ಮಗು ಸಾಂಕ್ಷಿತನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ಇತರರಿಗೆ ಮಾದರಿ ಆಗಿದೆ. ಪೆರ್ಲ ಬಳಿಯ ಕನ್ನಟಿಕಾನ ಸಮೀಪದ ಎಂಡೋಸಲ್ಫಾನ್ ಪೀಡಿತ ಮಕ್ಕಳ ವಿದ್ಯಾ ಕೇಂದ್ರದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ಉದ್ಘಾಟಿಸಿ, ನಮ್ಮಲ್ಲಿ ಹುಟ್ಟುಹಬ್ಬ , ಮದುವೆ ಇನ್ನಿತರ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಆಹಾರ ಪದಾರ್ಥವನ್ನು ಹಾಳುಗೆಡಹುತ್ತೇವೆ. ಈ ಮಧ್ಯೆ ಸಮಾಜದಲ್ಲಿ ಸಂಕಷ್ಟದಲ್ಲಿರುವ ದೀನರ ಬಗ್ಗೆ ಪ್ರಜ್ಞೆಯಿಲ್ಲದವರಂತೆ ವತರ್ಿಸುತ್ತೇವೆ. ಆದರೆ ಸಂತೋಷ್ ಕುಮಾರ್-ಡಾ. ಅಕ್ಷತಾ ಎಸ್.ಬಿ ಯವರು ತೊರಿಸಿಕೊಟ್ಟ ಕಾರ್ಯಕ್ರಮ ಉಳಿದವರಿಗೂ ಪ್ರೇರಣೆ, ಸ್ಪೂತರ್ಿದಾಯಕವಾಗುವುದರೊಂದಿಗೆ ಸದಾಶಯದ ಇಂತಹ ಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ ಪ್ರೋತ್ಸಾಹಿಸಬೇಕು ಎಂದು ಹಾರೈಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯೆ ಸವಿತಾ ಬಾಳಿಕೆ ,ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಮಲ್ಲಿಕಾ. ರೈ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬಿ.ಪಿ ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಡ್ಸ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ, ಜ್ಯೋತಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries