HEALTH TIPS

No title

            ಹೊಸ ವರ್ಷದ ಹೊಸ್ತಿಲಲ್ಲಿ ಮನ್ಕಿ ಬಾತ್- ನವಭಾರತ ನಿಮರ್ಾಣಕ್ಕೆ ಕೈ ಜೋಡಿಸುವ 21 ಶತಮಾನದ ಹೊಸ ಮತದಾರರಿಗೆ ಸ್ವಾಗತ: ಪ್ರಧಾನಿ ಮೋದಿ
         ನವದೆಹಲಿ: ನವಭಾರತ ನಿಮರ್ಾಣಕ್ಕೆ ಕೈ ಜೋಡಿಸಿ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
39ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಹೊಸವರ್ಷಕ್ಕೆ ಇನ್ನು ಕೇವಲ ಒಂದು ದಿನ ಬಾಕಿಯಿರುವ ಹಿನ್ನಲೆಯಲ್ಲಿ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ, ನವಭಾರತ ನಿಮರ್ಾಣಕ್ಕೆ ಕೈ ಜೋಡಿಸುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಹೇಳಿದ್ದಾರೆ.
   ಹೊಸ ಮತದಾರರೊಂದಿಗೆ 21ನೇ ಶತಮಾನ ನಾಳೆಯಿಂದ ಆರಂಭಗೊಳ್ಳಲಿದೆ. ಹೊಸ ಮತದಾರರನ್ನು ನಾವು ಸ್ವಾಗತಿಸುತ್ತೇವೆ. ಮತದಾರರ ಪಟ್ಟಿಗೆ ನಿಮ್ಮನ್ನು ನೋಂದಣಿ ಮಾಡಿಕೊಳ್ಳುವಂತೆ ಈ ಮೂಲಕ ಮನವಿ ಮಾಡಿಕೊಳ್ಳುದ್ದೇನೆ. ನಿಮಗೆ ಕೇವಲ ಮತ ಹಾಕುವ ಹಕ್ಕು ಅಷ್ಟೇ ಅಲ್ಲ, ನವಭಾರತ ನಿಮರ್ಾಣಕಾರರಾಗಲಿದ್ದೀರಿ. ಹೊಸ ಮತದಾರರನ್ನು ನವಭಾರತದ ಯುವಕರು ಎಂಬು ಎಂದು ನಾನು ಪರಿಗಣಿಸುತ್ತೇನೆ. ನವಭಾರತ ನಿಮರ್ಾಣದ ಕನಸನ್ನು ಹೊಸ ಮತದಾರರು ಪೂರ್ಣಗೊಳಿಸುತ್ತಾರೆಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ,
ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ, ಕಿಚಡಿ, ಲೊಹ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಎಲ್ಲಾ ಹಬ್ಬಗಳು ಪ್ರಕೃತಿಗೆ ಸಂಬಂಧಿಸಿದ್ದಾಗಿದೆ. ಈ ಎಲ್ಲಾ ಹಬ್ಬಗಳನ್ನು ಆಚರಿಸಿರುವ ಎಲ್ಲಾ ಧರ್ಮದ ಜನರಿಗೂ ಈ ಮೂಲಕ ಶುಭಾಶಯಗಳನ್ನು ಕೋರುತ್ತೇನೆಂದು ಹೇಳಿದ್ದಾರೆ.
   2018ರ ಗಣರಾಜ್ಯೋತ್ಸವ ದಿನಾಚರಣೆಗೆ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ, ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿದ್ದು, ಅವನ್ನು ಸ್ವಾಗತಿಸಲು ಭಾರತ ಕಾತರದಿಂದಿದೆ ಎಂದು ತಿಳಿಸಿದ್ದಾರೆ.
ಪುರುಷರ ನೆರವಿಲ್ಲದೆ ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಮಹಿಳೆಯರಿಗೆ ಅವಕಾಶವಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ರೀತಿಯ ಅಸಮಾನತೆ ಮುಂದುವರೆಯುವುದು ಸರಿಯೇ? ಈ ನಿರ್ಬಂಧಕ್ಕೆ ಅಲ್ಪಸಂಖ್ಯಾತರ ವ್ಯವಹಾರ ಇಲಾಖೆ ಅಂತ್ಯ ಹಾಡಿದ್ದು, ಒಬ್ಬಂಟಿಯಾಗಿ ಹಜ್ ಯಾತ್ರೆಗೆ ಹೊರಡುವ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಿ ಅವರಿಗೆ ವಿಶೇಷ ವ್ಯವಸ್ಥೆಯಡಿ ಯಾತ್ರೆಗೆ ಅವಕಾಶ ಮಾಡಿಕೊಡುವಂತೆ ಈಗಾಗಲೇ ಇಲಾಖೆಗೆ ಸಲಹೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.
   2018ರ ಜ.4ರಿಂದ ಮಾ.10ರವರೆಗೆ ಸ್ವಚ್ಛ ಸವರ್ೇಕ್ಷಣೆ ನಡೆಯಲಿದೆ. ದೇಶದ ಸುಮಾರು 4,000 ಪಟ್ಟಣಗಳಲ್ಲಿ ಈ ಸವರ್ೇಕ್ಷಣೆ ನಡೆಯಲಿದೆ. ಇದು ಅತ್ಯಂತ ದೊಡ್ಡ ಸವರ್ೇಕ್ಷಣೆ ಎಂದೇ ಹೇಳಬಹುದು ಶಬರಿಮಲೆಗೆ ತೆರಳುವವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಮಾನ್ಯ ಜನರಲ್ಲದೆ. ಗಣ್ಯರು ಹಾಗೂ ಅಧಿಕಾರಿಗಳೂ ಕೂಡ ಭಾಗಿಯಾಗಲಿದ್ದಾರೆ.
ಉಗ್ರರ ಕಿರುಕುಳವನ್ನು ಮೆಟ್ಟಿನಿಂತು, ಪ್ರತ್ಯೇಕತಾವಾದಿಗಳೊಡನೆ ಕೈಜೋಡಿಸದೇ ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕಾಶ್ಮೀರದ ಅಂಜುಮ್ ಬಷೀರ್ ಖಾನ್ ಇಂದು ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
    ಗಮನೀಯ ಅಂಶಗಳು:   2018ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಆಸಿಯಾನ್ ನಾಯಕರು
    ಆಕಾಶವಾಣಿಯ `ಮನದ ಮಾತು' ಸರಣಿಯಲ್ಲಿ ಭಾನುವಾರ ಮಾತನಾಡಿದ ನರೇಂದ್ರ ಮೋದಿ, `ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. ಭಾರತವು ಅವರನ್ನು ಸ್ವಾಗತಿಸಲು ಕಾತರದಿಂದಿದೆ' ಎಂದಿದ್ದಾರೆ...
    2018ರ ಗಣರಾಜ್ಯೋತ್ಸವಕ್ಕೆ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
   ಆಕಾಶವಾಣಿಯ `ಮನದ ಮಾತು' ಸರಣಿಯಲ್ಲಿ ಭಾನುವಾರ ಮಾತನಾಡಿದ ಅವರು, `ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. ಭಾರತವು ಅವರನ್ನು ಸ್ವಾಗತಿಸಲು ಕಾತರದಿಂದಿದೆ' ಎಂದಿದ್ದಾರೆ.
  `ಪುರುಷ ಸಹಾಯಕರ ನೆರವಿಲ್ಲದೆ ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಮಹಿಳೆಯರಿಗೆ ಅವಕಾಶವಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ನಂತರವೂ ಈ ರೀತಿಯ ಅಸಮಾನತೆ ಮುಂದುವರಿಯುವುದು ಸರಿಯೇ? ಈ ನಿರ್ಬಂಧಕ್ಕೆ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಅಂತ್ಯ ಹಾಡಿದೆ. ಒಂಟಿಯಾಗಿ ಹಜ್ ಯಾತ್ರೆಗೆ ಹೊರಡುವ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಿ ಅವರಿಗೆ ವಿಶೇಷ ವ್ಯವಸ್ಥೆಯಡಿ ಯಾತ್ರೆಗೆ ಅನುವು ಮಾಡಿಕೊಡುವಂತೆ ಇಲಾಖೆಗೆ ಸಲಹೆ ನೀಡಿದ್ದೇನೆ' ಎಂದು ಹೇಳಿದ್ದಾರೆ.
  `2018ರ ಜನವರಿ 4ರಿಂದ ಮಾಚರ್್ 10ರವರೆಗೆ ಸ್ವಚ್ಛ ಸವರ್ೇಕ್ಷಣೆ ನಡೆಯಲಿದೆ. ದೇಶದ ಸುಮಾರು ನಾಲ್ಕು ಸಾವಿರ ಪಟ್ಟಣಗಳಲ್ಲಿ ಈ ಸವರ್ೇಕ್ಷಣೆ ನಡೆಯಲಿದೆ' ಎಂದು ಮೋದಿ ತಿಳಿಸಿದ್ದಾರೆ.
  `ಕೌಶಲ ಅಭಿವೃದ್ಧಿ ಹಾಗೂ ನವೋದ್ಯಮಗಳಿಗಾಗಿ ಸಾಕಷ್ಟು ಅವಕಾಶಗಳಿವೆ. ಯುವಕರು ಇವುಗಳ ಬಗ್ಗೆ ಮಾಹಿತಿ ಪಡೆದು ಇದರ ಪ್ರಯೋಜನ ಪಡೆಯಬೇಕು' ಎಂದಿದ್ದಾರೆ.
  ಹೊಸ ವರ್ಷಕ್ಕೆ ದೇಶದ ಜನತೆಗೆ ಮೋದಿ ಶುಭಾಶಯ ಕೋರಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries