HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ತುಳುನಾಡೋಚ್ಚಯ-ಬಾಲೆ ಬಂಗಾರ್ ಸೀಸನ್ 2ರ ಫಲಿತಾಂಶ ಘೋಷಣೆ
    ಮಂಜೇಶ್ವರ:  ವಿಶ್ವ ತುಳುವೆರ ಆಯೋನೋ ಕೂಟ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ ಡಿಸೆಂಬರ್  23 ಹಾಗೂ 24 ರಂದು ಪಿಲಿಕುಳದ ಸಂಸ್ಕೃತಿ ಗ್ರಾಮದಲ್ಲಿ ಜರಗಲಿರುವ ತುಳುನಾಡೋಚ್ಛಯ 2017 ಕಾರ್ಯಕ್ರಮದಂಗವಾಗಿ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಮುದ್ದು ಮಕ್ಕಳ ಫೋಟೋ ಸ್ಪಧರ್ೆ ಸೀಸನ್-2 ತುಳುನಾಡ ಬಾಲೆ ಬಂಗಾರ್ 2017 ರ ಫಲಿತಾಂಶವನ್ನು ಶನಿವಾರ ಸಂಜೆ ಹೊಸಂಗಡಿಯ ಹಿಲ್ಸೈಡ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರ್ಪಗಾರರು ವಿಜೇತ ಮಕ್ಕಳ ಹೆಸರನ್ನು ಪ್ರಕಟಿಸಿದರು.
   ಪ್ರಥಮ ಸ್ಥಾನವನ್ನು ದಕ್ಷ. ಜೆ. ಆಚಾರ್ಯ ಕದ್ರಿ, ಮಂಗಳೂರು, ದ್ವಿತಿಯ ಸ್ಥಾನವನ್ನು ರಿಷಿಕ್ ಶೆಟ್ಟಿ ಹೊಸಬೆಟ್ಟು ಮಂಜೇಶ್ವರ, ತೃತಿಯ ಸ್ಥಾನವನ್ನು ಯಶ್ವಿ ಶೆಟ್ಟಿ. ಕೆ.ಎಸ್, ಬೇಕೂರು, ಉಪ್ಪಳ. ಚತುರ್ಥ ಸ್ಥಾನವನ್ನು ಅನಾಘ್ ಬೀಡುಬೈಲು ಪೆರ್ಲ, ಪಂಚಮ ಸ್ಥಾನವನ್ನು ಅದ್ವಯ್.ಯು.ಶೆಟ್ಟಿ ಸುಳ್ಯಮೆ ಕೊಡ್ಲಮೊಗರು ಪಡೆದರು.
  ಈ ಬಗ್ಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರದ ಅಧ್ಯಕ್ಷ ಸಂಕಬೈಲು ಸತೀಶ್ ಅಡಪ ವಹಿಸಿ ಮಾತನಾಡಿ, ಕಳೆದ ವರ್ಷದ ತುಳುನಾಡ ಬಾಲೆ ಬಂಗಾರ್ ಮುದ್ದು ಮಕ್ಕಳ ಫೋಟೋ ಸ್ಪಧರ್ೆ ಯಶಸ್ವಿಯಾಗಿದ್ದು, ಈ ಬಾರಿಯೂ ಕೂಡಾ ಹಲವಾರು ಕಡೆಗಳಿಂದ ಮಕ್ಕಳ ಪೋಷಕರು ಕಾರ್ಯಕ್ರಮದ ಬಗ್ಗೆ ಪ್ರಶಂಸಿಸಿ ಮಾತನಾಡಿ ಈ ಬಾರಿಯೂ ಕೂಡಾ ಅಪೇಕ್ಷೆ ಪಟ್ಟ ಕಾರಣ ತಡವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆದರೂ ಅತೀ ಹೆಚ್ಚಿನವರು ಸ್ಪಧರ್ೆಯಲ್ಲಿ ಪಾಲ್ಗೋಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆಂದು ನುಡಿದರು.
   ಈ ವೇಳೆ ತೀಪರ್ುಗಾರರಲ್ಲೊಬ್ಬರಾದ ಚಿತ್ರ ಕಲಾವಿದ ಜಯಪ್ರಸಾದ್ ಕೋಟೆಕಾರ್ ಮಾತನಾಡಿ ತುಳುನಾಡಿನ ಮಕ್ಕಳ ಮಣ್ಣಿನ ಗುಣಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಲೆ ಬಂಗಾರ ಎಂಬ ಛಾಯಾ ಚಿತ್ರ ಸ್ಪಧರ್ೆ ತುಳುನಾಡಿನ ಬೆಳವಣಿಗೆಗೆ ಪರೋಕ್ಷ ಪ್ರೋತ್ಸಾಹ ನೀಡುವ ವೇದಿಕೆಯಾಗಿದೆ. ಇಂದು ತುಳುನಾಡಿನ ಉಳಿವಿಗಾಗಿ ವಿವಿಧ ರೀತಿಯ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದ್ದು, ಇಂತಹದೊಂದು ಕೈಂಕಾರ್ಯದಿಂದ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿದಂತಾಗುವುದಲ್ಲದೇ ಇಂದಿನ ಮಕ್ಕಳ ಉಡುಗೆ ತೊಡುಗೆಗಳ ಮೂಲಕ ತುಳು ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ದಾಟಿಸುವಂತಾಗುತ್ತದೆ ಎಂಬ ಎರಡು ಸಾಧನೆಯನ್ನು ಮಾಡಿದಂತಾಗುತ್ತದೆ ಎಂದರು. ಛಾಯಾಚಿತ್ರ ಹಾಗೂ ಕಲಾನಿದರ್ೇಶಕರಾದ ಇನ್ನೋರ್ವ ತೀಪರ್ುಗಾರ ನಾಗಾಜರ್ುನ ಮಂಗಲ್ಪಾಡಿ ಇವರು ಮಾತನಾಡಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಈ ಕಾರ್ಯ ಪ್ರಪ್ರಥಮವಾಗಿದೆ. ಅತ್ಯಧಿಕ ಛಾಯಾ ಚಿತ್ರಗಳ ಸ್ಪಂದನೆಯಿದ್ದು ಆದರೆ ನಿಯಮತೀತವಾಗಿತ್ತು ಎಂದು ನುಡಿದರು. ತೀಪರ್ುಗಾರರಾದ ಮಕ್ಕಳ ತಜ್ಞ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ತುಳುನಾಡ ಬಾಲೆ ಬಂಗಾರ ಸಮಿತಿಯ ಉಪಾದ್ಯಕ್ಷ ಸಂಜೀವ ಶೆಟ್ಟಿ ಮಾಡ, ಪ್ರಧಾನ ಕಾರ್ಯದಶರ್ಿ ರತನ್ ಕುಮಾರ್ ಹೊಸಂಗಡಿ, ಕೋಶಾಧಿಕಾರಿ ಬಾಬು ಮಾಸ್ತರ್, ಜೊತೆ ಕಾರ್ಯದಶರ್ಿಗಳಾದ ತುಳಸಿದಾಸ್ ಮಂಜೇಶ್ವರ, ಯುವ ಕವಿ ಮೌನೇಶ ಆಚಾರ್ಯ, ಕಡಂಬಾರು, ಸಾಮಜಿಕ ಕಾರ್ಯಕರ್ತ ಕಾತರ್ಿಕ್ ಶೆಟ್ಟಿ ಮಜಿಬೈಲು, ದೀಪಕ್ ರಾಜ್ ಉಪ್ಪಳ ಉಪಸ್ಥಿತರಿದ್ದು ಶುಭಾಸಂಶನೆಗೈದರು. ಕಾರ್ಯಕ್ರಮದ ಸಂಘಟಕರಾದ ಜಯ ಮಣಿಯಂಪಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸ್ಪಧರ್ೆಯನ್ನು ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿತ್ತು. ಸ್ಪಧರ್ೆಗೆ ಒಟ್ಟು 56 ಫೋಟೋಗಳು ಲಭಿಸಿದ್ದು ತೀಪರ್ುಗಾರರ ಅಂತಿಮ ತೀಮರ್ಾನದಂತೆ ತುಳುನಾಡಿನ ಸಂಪ್ರದಾಯ ಉಡುಗೆ ತೊಡುಗೆ, ಸಂಸ್ಕಾರ, ಕಲೆ ಮೊದಲಾದವುಗಳಿಗೆ ಪ್ರಾಧಾನ್ಯತೆಯನ್ನು ನೀಡಿ ಸ್ಪಧರ್ಾ ವಿಜೇತರನ್ನು ಆಯ್ಕೆಗೊಳಿಸಿ ವಿಜೇತ ಮಕ್ಕಳಿಗೆ ಈ ತಿಂಗಳ 23 ರಂದು ಶನಿವಾರ ಬೆಳಗ್ಗೆ ಪಿಲಿಕುಳದ ನಿಸರ್ಗಧಾಮದಲ್ಲಿ ನಡೆಯಲಿರುವ ತುಳುನಾಡೋಚ್ಚಯದ ಪ್ರಧಾನ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವುದು ಮತ್ತು ಅದೇ ದಿನ ವಿಜೇತ ಮಕ್ಕಳ ಫೋಟೋಗಳನ್ನು ಪ್ರದಶರ್ಿಸಲಾಗುವುದು ಎಂದು ತುಳುನಾಡ ಬಾಲೆ ಬಂಗಾರ್ ಸಮಿತಿ, ಮಂಜೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries