ಬಾಕ್ರಬೈಲಿನಲ್ಲಿ ಕನ್ನಡ ಸ್ವರ ಕಾರ್ಯಕ್ರಮ
ಮಂಜೇಶ್ವರ: ಗಡಿನಾಡಿನ ಕನ್ನಡ ಅನನ್ಯತೆಗೆ ಪೂರಕವಾಗುವ ಕಾರ್ಯಚಟುವಟಿಕೆಗಳು ನಿತ್ಯೋತ್ಸವದಂತೆ ನಡೆಯುತ್ತಿರಬೇಕು. ಮಕ್ಕಳಲ್ಲಿ ಭಾಷೆ, ಸಂಸ್ಕೃತಿಗಳ ಬಗ್ಗೆ ಕಾಳಜಿ ಮೂಡಿಸುವಲಲಿ ಕನ್ನಡ ಸ್ವರ ಕಾರ್ಯಕ್ರಮ ಸ್ತುತ್ಯರ್ಹವಾದುದು ಎಂದು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಬಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಪರಾಹ್ನ ಕಾಸರಗೋಡಿನ ಸಾಂಸ್ಕೃತಿಕ ಸಾಹಿತ್ತಿಕ ಸಂಸ್ಥೆ ರಂಗಚಿನ್ನಾರಿ ಯು ಕನರ್ಾಟಕ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಕಾಸರಗೋಡಿನ 2 ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಕಲಿಸಿಕೊಡುವ "ಕನ್ನಡ ಸ್ವರ" ಗೀತ ಗಾಯನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಡಿದರು.
ಗಡಿನಾಡಿನಲಲಿ ಆತಂಕದಲ್ಲಿರುವ ಕನ್ನಡ ಧ್ವನಿಯನ್ನು ಪುನಃ ಸ್ಥಾಪಿಸುವಲ್ಲಿ ಕನ್ನಡ ಸ್ವರ ಪರಿಣಾಮಕಾರಿಯಾಗಿ ಮೂಡಿಬರಲಿ ಎಂದು ಅವರು ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯ ಪಿ.ಬಿ.ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿಯ ಸಂಚಾಲಕ ಸತ್ಯನಾರಾಯಣ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಗಾಯಕ ಕಿಶೋರ್ ಪೆರ್ಲ ನಾಡಗೀತೆಗಳ ಗಾಯನ ತರಬೇತಿ ನೀಡಿದರು.
ಮಂಜೇಶ್ವರ: ಗಡಿನಾಡಿನ ಕನ್ನಡ ಅನನ್ಯತೆಗೆ ಪೂರಕವಾಗುವ ಕಾರ್ಯಚಟುವಟಿಕೆಗಳು ನಿತ್ಯೋತ್ಸವದಂತೆ ನಡೆಯುತ್ತಿರಬೇಕು. ಮಕ್ಕಳಲ್ಲಿ ಭಾಷೆ, ಸಂಸ್ಕೃತಿಗಳ ಬಗ್ಗೆ ಕಾಳಜಿ ಮೂಡಿಸುವಲಲಿ ಕನ್ನಡ ಸ್ವರ ಕಾರ್ಯಕ್ರಮ ಸ್ತುತ್ಯರ್ಹವಾದುದು ಎಂದು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಬಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಪರಾಹ್ನ ಕಾಸರಗೋಡಿನ ಸಾಂಸ್ಕೃತಿಕ ಸಾಹಿತ್ತಿಕ ಸಂಸ್ಥೆ ರಂಗಚಿನ್ನಾರಿ ಯು ಕನರ್ಾಟಕ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಕಾಸರಗೋಡಿನ 2 ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಕಲಿಸಿಕೊಡುವ "ಕನ್ನಡ ಸ್ವರ" ಗೀತ ಗಾಯನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಡಿದರು.
ಗಡಿನಾಡಿನಲಲಿ ಆತಂಕದಲ್ಲಿರುವ ಕನ್ನಡ ಧ್ವನಿಯನ್ನು ಪುನಃ ಸ್ಥಾಪಿಸುವಲ್ಲಿ ಕನ್ನಡ ಸ್ವರ ಪರಿಣಾಮಕಾರಿಯಾಗಿ ಮೂಡಿಬರಲಿ ಎಂದು ಅವರು ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯ ಪಿ.ಬಿ.ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿಯ ಸಂಚಾಲಕ ಸತ್ಯನಾರಾಯಣ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಗಾಯಕ ಕಿಶೋರ್ ಪೆರ್ಲ ನಾಡಗೀತೆಗಳ ಗಾಯನ ತರಬೇತಿ ನೀಡಿದರು.


