HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಜ.5-7 : ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ 8 ನೇ ಕಾರ್ಯ ಸಮಿತಿ ಸಮಾವೇಶ
    ಕಾಸರಗೋಡು: ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ 8 ನೇ ಕಾರ್ಯ ಸಮಿತಿ ಜನವರಿ 5, 6 ಮತ್ತು 7 ರಂದು ತೈರೆ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರಗಲಿದೆ. 14 ರಾಜ್ಯಗಳಿಂದ 150 ಪ್ರತಿನಿಧಿಗಳು ಭಾಗವಹಿಸುವರು.
ಜ.5 ರಂದು ಮಧ್ಯಾಹ್ನ 2 ಗಂಟೆಗೆ ತಾಲೂಕು ಎನ್.ಜಿ.ಒ. ಸಂಘದ ಪ್ರಥಮ ಅಧ್ಯಕ್ಷರಾಗಿದ್ದ 92 ರ ಹರೆಯದ ನೀಲೇಶ್ವರ್ ದೇವದಾಸ್ ಅವರು ದೀಪ ಬೆಳಗಿಸಿ ಉದ್ಘಾಟಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ನಂತರ ಬಿಜೆಪಿ ದಕ್ಷಿಣ ಪ್ರಾಂತ್ಯಗಳ ಸಂಘಟನಾ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಪಿ.ಮುಕುಂದನ್ ಅವರು ಮುಖ್ಯ ಭಾಷಣಗಾರರಾಗಿ ಭಾಗವಹಿಸುವರು.
   ತುತರ್ು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ ಎಂ.ಕೃಷ್ಣನ್ ನಂಬ್ಯಾರ್, ನಂಜಿಲ್ ಕುಂಞಿರಾಮನ್, ನಂಜಿಲ್ ಮಾಧವನ್, ಟಿ.ವಿ.ದಾಮೋದರನ್, ಸಿ.ಎ.ಲಕ್ಷ್ಮೀನಾರಾಯಣ, ಮಧುಸೂದನನ್ ನಂಬ್ಯಾರ್, ತಂಬಾನ್ ನಾಯರ್, ಕುಂಞಿರಾಮನ್, ಭಾಸ್ಕರನ್, ಮಾಧವನ್ ನಾಯರ್ ಮೊದಲಾದವರನ್ನು ಸಭೆಯಲ್ಲಿ ಸಮ್ಮಾನಿಸಲಾಗುವುದು.
  ಸಭೆಯ ಅಧ್ಯಕ್ಷತೆಯನ್ನು ಮಹಾಸಂಘದ ಅಧ್ಯಕ್ಷರಾದ ಸಿ.ಎಚ್.ಸುರೇಶ್ ವಹಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಜಿ.ದಿವಾಕರನ್, ಬಾಲಕೃಷ್ಣ ಮಲ್ಲಿಗೆಮಾಡು ಉಪಸ್ಥಿತರಿರುವರು. ಜ.6 ರಂದು ವಿವಿಧ ರಾಜ್ಯಗಳಲ್ಲಿರುವ ಪಿಂಚಣಿ ಸೌಲಭ್ಯಗಳ ಕುರಿತಾಗಿ ಕೂಲಂಕುಶವಾಗಿ ಚಚರ್ಿಸಲಾಗುವುದು. 7 ರಂದು ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries