HEALTH TIPS

No title

                    ವಾಷರ್ಿಕ ಜಾತ್ರೆ : ಆಮಂತ್ರಣ ಪತ್ರಿಕೆ ಬಿಡುಗಡೆ
    ಮಧೂರು: ಪ್ರಾಮಾಣಿಕ ಭಕ್ತಿ ಶ್ರದ್ಧೆಯಿಂದ ದುಡಿದಾಗ ಮಾತ್ರವೇ ದೇವರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮಹಾಲಿಂಗಯ್ಯ ಕೊಲ್ಯ ಹೇಳಿದರು.
   ಅವರು ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀಣರ್ೋದ್ಧಾರ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಫೆಬ್ರವರಿ 27 ರಂದು ನಡೆಯಲಿರುವ ವಾಷರ್ಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಜೀಣರ್ೋದ್ಧಾರ ಕಾಮಗಾರಿಗಳ ಪ್ರಗತಿಯನ್ನು ಅವಲೋಕಿಸಲಾಯಿತು. ಜೀಣರ್ೋದ್ಧಾರ ಕಾರ್ಯಗಳಿಗೆ ಬೇಕಾದ ಧನ ಸಂಗ್ರಹವನ್ನು ತ್ವರಿತಗೊಳಿಸಲಿರುವ ಮಾಗರ್ೋಪಾಯಗಳನ್ನು ಚಚರ್ಿಸಲಾಯಿತು. ಪ್ರಸ್ತುತ ಕಾರ್ಯದಲ್ಲಿ ಸಹಕರಿಸುತ್ತಿರುವ ಭಗವದ್ಭಕ್ತರೆಲ್ಲರಿಗೂ ಕೃತಜ್ಞತೆಯನ್ನು ಸೂಚಿಸಲಾಯಿತು.
   ಡಾ.ನಾರಾಯಣ ಆಸ್ರ ಉಳಿಯತ್ತಾಯ, ವಾಸುದೇವ ಆಸ್ರ, ನಾರಾಯಣಯ್ಯ ಕೊಲ್ಯ, ಎಸ್.ಎನ್.ಮಯ್ಯ ಬದಿಯಡ್ಕ, ಬಾಲಕೃಷ್ಣ ಮಧೂರು, ಕೃಷ್ಣ ನಾಗರಕಟ್ಟೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವಾಷರ್ಿಕ ಜಾತ್ರೆಯ ಯಶಸ್ಸಿಗೆ ಊರಪರವೂರ ಭಕ್ತ ಜನರ ಸಹಕಾರವನ್ನು ಕೋರಲಾಯಿತು. ಸಮಿತಿಯ ಮುಂದಿನ ಸಭೆಯನ್ನು ಫೆ.25 ರಂದು ನಡೆಸಲು ತೀಮರ್ಾನಿಸಲಾಯಿತು. ಜೀಣರ್ೋದ್ಧಾರ ಸಮಿತಿಯ ಪ್ರಧಾನ ಕಾರ್ಯದಶರ್ಿ ವಿಷ್ಣು ಭಟ್ ಕಕ್ಕೆಪ್ಪಾಡಿ ಸ್ವಾಗತಿಸಿ, ಗಣೇಶ ತುಂಗ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries