HEALTH TIPS

No title

                ಘನವಾಹನಗಳಿಗೆ ಸಂಚಾರ ನಿಷೇಧ
   ಮಂಜೇಶ್ವರ: ಹೊಸಂಗಡಿಯಿಂದ ಕೊಡ್ಲಮೊಗರು ಮಾರ್ಗವಾಗಿ ವಿಟ್ಲ , ಆನೆಕಲ್ಲು , ಕನ್ಯಾನ, ಬಾಕ್ರಬೈಲು ಭಾಗಕ್ಕೆ ತೆರಳುವ ಘನ ವಾಹನಗಳಿಗೆ ಕೊಡ್ಲಮೊಗರಿನಲ್ಲಿರುವ 100 ಮೀಟರ್ ಅಂತರಾಜ್ಯ ಲೋಕೋಪಯೋಗಿ ರಸ್ತೆಗೆ ಕಾಂಕ್ರೀಟೀಕರಣ ಆರಂಭಗೊಂಡ ಹಿನ್ನೆಲೆಯಲ್ಲಿ  ಈ ದಾರಿಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಆದರೆ ಬೈಕ್, ರಿಕ್ಷಾ , ಕಾರು ಮುಂತಾದ ವಾಹನಗಳಿಗೆ ಈ ರಸ್ತೆಯ ಬದಿಯಲ್ಲಿ  ಸಂಚರಿಸಲು ವ್ಯವಸ್ಥೆ  ಮಾಡಲಾಗಿದೆ.
ಬಸ್ ಮತ್ತು  ಇನ್ನಿತರ ಘನ ವಾಹನಗಳಿಗೆ ಬಾಕ್ರಬೈಲಿನಿಂದ ಹೊಸಂಗಡಿ ಕಡೆ ಬರುವುದಾದರೆ ಬಾಕ್ರಬೈಲು - ಮುಡಿಪು - ಪೊಯ್ಯತ್ತಬೈಲು - ದೈಗೋಳಿ ಮೂಲಕ ಹೊಸಂಗಡಿಗೆ ತೆರಳಬಹುದು. ವಿಟ್ಲದಿಂದ ಹೊಸಂಗಡಿ ಭಾಗಕ್ಕೆ ಆಗಮಿಸುವ ವಾಹನಗಳು ವಿಟ್ಲ , ಸಾಲೆತ್ತೂರು, ಬಾಕ್ರಬೈಲು, ಮುಡಿಪು, ಪೊಯ್ಯತ್ತಬೈಲು, ದೈಗೋಳಿ ಮೂಲಕ ಹೊಸಂಗಡಿಗೆ ಸಂಚರಿಸಬಹುದು. ಕನ್ಯಾನದಿಂದ ಹೊಸಂಗಡಿ ಭಾಗಕ್ಕೆ ಬರುವುದಾದರೆ ಕನ್ಯಾನ, ಆನೆಕಲ್ಲು , ಗುವೆದಪಡ್ಪು , ಬಾಕ್ರಬೈಲು, ಮುಡಿಪು, ಪೊಯ್ಯತ್ತಬೈಲು, ದೈಗೋಳಿ ಮೂಲಕ ಹೊಸಂಗಡಿಗೆ ಮತ್ತು  ಕನ್ಯಾನ, ಆನೆಕಲ್ಲು , ಕತ್ತರಿಕೋಡಿ, ಕುಂಟುಪದವು, ದೈಗೋಳಿ ಮೂಲಕ ಹೊಸಂಗಡಿ ಭಾಗಕ್ಕೆ ಸಂಚರಿಸಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries