HEALTH TIPS

No title

                ಮುಖ್ಯಮಂತ್ರಿ ವಿರುದ್ಧ  ಯುವಮೋಚರ್ಾ ಪ್ರತಿಭಟನೆ
   ಕುಂಬಳೆ: ಕಣ್ಣೂರಿನಲ್ಲಿ  ನಡೆದ ಸಿಪಿಎಂ ಜಿಲ್ಲಾ  ಸಮ್ಮೇಳನದಲ್ಲಿ  ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿ ಚೀನಾ ದೇಶದ ಪರ ನೀಡಿದ ಹೇಳಿಕೆ ವಿರುದ್ಧ ಭಾರತೀಯ ಜನತಾ ಯುವಮೋಚರ್ಾದ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ  ಕುಂಬಳೆಯಲ್ಲಿ  ಪ್ರತಿಭಟನೆ ನಡೆಸಲಾಯಿತು.
   ಯುವಮೋಚರ್ಾ ರಾಜ್ಯ ಮಾಧ್ಯಮ ಸೆಲ್ ಸಂಚಾಲಕ ವಿಜಯಕುಮಾರ್ ರೈ ಪ್ರತಿಭಟನಾ ಸಭೆಯನ್ನು  ಉದ್ಘಾಟಿಸಿ ಮಾತನಾಡಿ, ಭಾರತವನ್ನು  ವಿರೋಧಿಸುವ ಪಿಣರಾಯಿ ವಿಜಯನ್ ಅವರು ಚೀನಾವನ್ನು  ಹೊಗಳುತ್ತಿರುವುದು ದೇಶದ್ರೋಹವೆಂದು ಟೀಕಿಸಿದರು. ಆದ್ದರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿ  ಮುಂದುವರಿಯುವುದಕ್ಕೆ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ  ಎಂದು ಗುಡುಗಿದರು.
   ಯುವಮೋಚರ್ಾ ಮಂಡಲಾಧ್ಯಕ್ಷ  ಹರೀಶ್ ಪಡ್ರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ  ಪ್ರಧಾನ ಕಾರ್ಯದಶರ್ಿ ಸುಮಿತ್ರಾಜ್ ಪೆರ್ಲ, ಉಪಾಧ್ಯಕ್ಷ  ಧನ್ರಾಜ್ ಪ್ರತಾಪನಗರ, ಕಾರ್ಯದಶರ್ಿ ಮಹೇಶ್ ಕೆ.ವಿ., ಬಿಜೆಪಿ ನೇತಾರ ವಸಂತಕುಮಾರ್ ಕೆ., ಪ.ಜಾತಿ, ವರ್ಗ ವಿಭಾಗಗಳ ಮೋಚರ್ಾದ ಶಂಕರ ಕೆ., ಯುವಮೋಚರ್ಾ ಕುಂಬಳೆ ಪಂಚಾಯತು ಸಮಿತಿಯ ಅಧ್ಯಕ್ಷ  ಕೆ.ಸುಧಾಕರ ಕಾಮತ್ ನೇತೃತ್ವ ವಹಿಸಿದ್ದರು. ನಿತಿನ್ ಮಣಿಯಂಪಾರೆ ಸ್ವಾಗತಿಸಿ, ಪ್ರಜ್ವಲ್ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries