HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕುರುಡಪದವು : ಶಾಲಾ ವಾಷರ್ಿಕೋತ್ಸವ
   ಉಪ್ಪಳ: ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯ ವಾಷರ್ಿಕೋತ್ಸವ ಮತ್ತು ಸಮ್ಮಾನ ಕಾರ್ಯಕ್ರಮ ಜ.13 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಪೂವರ್ಾಹ್ನ 9.30 ಕ್ಕೆ ಶಾಲಾ ಪ್ರಬಂಧಕರಿಂದ ಧ್ವಜಾರೋಹಣ, 10 ಕ್ಕೆ ಮನೋರಂಜನಾ ಕಾರ್ಯಕ್ರಮ, ಅಪರಾಹ್ನ 4 ಕ್ಕೆ ಸೇವೆಯಿಂದ ನಿವೃತ್ತರಾಗಲಿರುವ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಭಟ್ ಎಸ್. ಅವರಿಗೆ ಸಮ್ಮಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲಾ ವಿದ್ಯಾಧಿಕಾರಿ ಆಪ್ತ ಸಹಾಯಕ ನಂದಲಾಲ್ ಭಟ್ ಪಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ರಾಮ, ಖ್ಯಾತ ಸಾಹಿತಿ ಮಲಾರ್ ಜಯರಾಮ ರೈ, ಉದ್ಯಮಿ ಅಂದುಂಞಿ ಹಾಜಿ ಉಪಸ್ಥಿತರಿರುವರು.
   ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ತಾರಾ ವಿ.ಶೆಟ್ಟಿ, ಚನಿಯ, ನಿವೃತ್ತ ಮುಖ್ಯೋಪಾಧ್ಯಾಯ ಪಿ.ವಿ.ಸತೀಶ್ವರ ಭಟ್ ಶುಭಹಾರೈಸುವರು. ಸಂಜೆ 6.30 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಯಕ್ಷಗಾನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries