HEALTH TIPS

No title

                 ದುಶ್ಚಟ ಕುರಿತಾದ ಮಾಹಿತಿ ಹಾಗೂ ಬೀದಿ ನಾಟಕ
     ಮಂಜೇಶ್ವರ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕೇಂದ್ರ ತಲಪಾಡಿ ವಲಯದ ವತಿಯಿಂದ ವಿಶೇಷ ಕಾರ್ಯಕ್ರಮ `ಸೃಜನಶೀಲ' ದಡಿಯಲ್ಲಿ ದುಶ್ಚಟ ಕುರಿತಾದ ಮಾಹಿತಿ ಹಾಗೂ ಬೀದಿ ನಾಟಕ ಸೋಮವಾರ ಸಂಜೆ ಉಪ್ಪಳ ಪಚ್ಲಂಪಾರೆಯ ಶ್ರೀ ದುಗರ್ಾಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತು ಮಾಜಿ ಸದಸ್ಯ  ಪುಷ್ಪರಾಜ ಐಲ ದೀಪ ಬೆಳಗಿಸಿ ಉದ್ಘಾಟಿಸಿದರು.
   ಗ್ರಾಮ ಪಂಚಾಯತು ಸದಸ್ಯ ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಸಂಯೋಜಕಿ ಲಲಿತ, ಸೇವಾ ಪ್ರತಿನಿಧಿ ಮಾಲಿನಿ .ಆರ್, ಕಾಸರಗೋಡು ತಾಲೂಕು ಸಮನ್ವಯ
ಅಧಿಕಾರಿ ಆಶಾ ಚಂದ್ರ ದೇವಾಡಿಗ, ವಲಯ ಮೇಲ್ವಿಚಾರಕ ಮೋಹನ್ ಕೆ ಉಪಸ್ಥಿತರಿದ್ದು, ದುಶ್ಚಟದಿಂದ ಆಗುವ ಲೋಪದೋಷಗಳ ಬಗ್ಗೆ ವಿವರಿಸಿ ಪ್ರತಿಯೊಂದು ಮನೆ ದುಶ್ಚಟದಿಂದ ದೂರವಿರುವ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು.
  ಬಳಿಕ ಚಿನ್ಮಯಿ ಜ್ಞಾನ ವಿಕಾಸ ಕೇಂದ್ರ ಪಳ್ಳಿಕೆರೆಯವರು ನೆರೆಕೆರೆಯವರೊಂದಿಗೆ ಹೇಗಿರಬೇಕು, ಪರಿಸರವನ್ನು ಸ್ವಚ್ಛತೆಯಿಡುವ ಬಗ್ಗೆ ಹೆಂಡ
ಸಾರಾಯಿ ಸಹವಾಸದಿಂದ ಮನೆಯಲ್ಲಿ ಸೃಷ್ಟಿಯಾಗುವ ಅನಾಹುತಗಳ ಬಗ್ಗೆ `ದುಶ್ಚಟ' ಎಂಬ ನಾಟಕವನ್ನು ಪ್ರದಶರ್ಿಸಿದರು. ಸಮಾರೋಪ ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತು ಮಾಜಿ ಸದಸ್ಯ ಪುಷ್ಪರಾಜ್ ಐಲ ಮಾತನಾಡಿದರು. ಸೇವಾ ಪ್ರತಿನಿಧಿ ಮಾಲಿನಿ ಸ್ವಾಗತಿಸಿ, ಕಾಸರಗೊಡು ತಾಲೂಕು ಸಮನ್ವಯ ಅಧಿಕಾರಿ ಆಶಾ ಚಂದ್ರ ದೇವಾಡಿಗ ನಿರೂಪಿಸಿ, ಮೋಹನ್. ಕೆ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries