HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಇಂದು `ಪದ್ಮಗಿರಿ'ಯಲ್ಲಿ ದಾಸ ಕೀರ್ತನೆಗಳ ಝೇಂಕಾರ ಧನ್ಯನಾದೆನೊ'
   ಕಾಸರಗೋಡು: ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಫೆ.11 ರಂದು ಬೆಳಗ್ಗೆ 9.30 ರಿಂದ ಕರಂದಕ್ಕಾಡಿನಲ್ಲಿರುವ `ಪದ್ಮಗಿರಿ ಕಲಾಕುಟೀರ'ದಲ್ಲಿ ದಾಸ ಕೀರ್ತನೆಗಳ ಝೇಂಕಾರ ಧನ್ಯನಾದೆನೊ' ಕಾರ್ಯಕ್ರಮ ಜರಗಲಿದೆ.
   ಬೆಳಗ್ಗೆ 9.30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಿಂದುಸ್ಥಾನಿ ಗಾಯಕಿ ಡಾ|ಸಂಪದಾ ಭಟ್ ಮರಬಳ್ಳಿ ಅವರು ಅಧ್ಯಕ್ಷತೆ ವಹಿಸುವರು. ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸುವರು. ಗಮಕ ಕಲಾ ಪರಿಷತ್ತು ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್ ಅತಿಥಿಯಾಗಿ ಭಾಗವಹಿಸುವರು.
   ಬೆಳಗ್ಗೆ 9.45 ರಿಂದ ಪದ್ಮಪ್ರಿಯ ಭಜನಾ ಮಂಡಳಿ, 10.35 ರಿಂದ ಶ್ರೀ ಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ, 11.20 ರಿಂದ ಶ್ರೀ ವಿಶ್ವಪ್ರಿಯ ಭಜನಾ ಮಂಡಳಿ ಏತಡ್ಕ ಇವರಿಂದ ದಾಸ ಕೀರ್ತನೆಗಳ ಝೇಂಕಾರ ನಡೆಯಲಿದೆ.
  ಮಧ್ಯಾಹ್ನ 12.15 ರಿಂದ 1.15 ರ ವರೆಗೆ ಖ್ಯಾತ ದಾಸ ಸಂಕೀರ್ತನಾಗಾರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ 501 ನೇ ದಾಸ ಸಂಕೀರ್ತನೆ ಕಾರ್ಯಕ್ರಮ ಜರಗಲಿದೆ ಎಂದು ಸಂಚಾಲಕರಾದ ಕಾಸರಗೋಡು ಚಿನ್ನಾ ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಐಲ ಹಾಮರ್ೋನಿಯಂನಲ್ಲೂ, ಗಿರೀಶ್ ಪೆರ್ಲ ತಬಲಾದಲ್ಲೂ ಸಹಕರಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries