HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಕೊಂಡೆವೂರಿಗೆ ಇಂದು ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್
  ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ನಕ್ಷತ್ರೇಷ್ಟಿ ಕಾರ್ಯಕ್ರಮದ ಅಂಗವಾಗಿಉ ಶನಿವಾರ ಬೆಳಿಗ್ಗೆ ಪುಣ್ಯಾಹ, ಲಕ್ಷ್ಮೀನಾರಾಯಣ ಹೃದಯಹೋಮ, ಪೂಣರ್ಾಹುತಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆಗಳು ನಡೆಯಿತು. ಸಂಜೆ ಶಕ್ತಿ ದಂಡಕಮಂಡಲ ಪೂಜೆ ನಡೆಯಿತು.
   ನಕ್ಷತ್ರೇಷ್ಟಿ ಮಂಟಪದಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ಅನುರಾಧಾದಿಂದ ಭರಣಿಯ ವರೆಗಿನ ಹದಿನಾಲ್ಕು ನಕ್ಷತ್ರಗಳ ಇಷ್ಟಿ ನಡೆದು ಪೂಣರ್ಾಹುತಿ ನಡೆಯಿತು. ಸೂಯರ್ಾಸ್ತಮಾನಕ್ಕೆ ಅಗ್ನಿಹೋತ್ರ ಹೋಮ ನಡೆಯಿತು.
   ಭಾನುವಾರ ಬೆಳಿಗ್ಗೆ ಪುಣ್ಯಾಹ, ಚಂಡಿಕಾ ಹೋಮ, ಗಣಯಾಗ, ನವಗ್ರಹ ಪೂಜೆ ನಡೆಯಲಿದೆ. ನಕ್ಷತ್ರೇಷ್ಟಿ ಮಂಟಪದಲ್ಲಿ ಬೆಳಿಗ್ಗೆ ಅಗ್ನಿಹೋತ್ರ ಹೋಮ, ನಕ್ಷತ್ರಾದಿ ದೇವತೆಗಳ ಇಷ್ಟಿ ಪೂಣರ್ಾಹುತಿ, ವಿಪ್ರಾಶೀವರ್ಾದ ನಡೆಯಲಿದೆ.
  ಅಪರಾಹ್ನ 2.30 ರಿಂದ ನಡೆಯಲಿರುವ ಧಾಮರ್ಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು, ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಕಟೀಲು, ವಿದ್ವಾನ್ ಗಣೇಶ ವಾಸುದೇವ ಬೋಗಳೇಕರ್ ಗೋಕರ್ಣ, ಬ್ರಹ್ಮಶ್ರೀ ಚೆರುಮುಕ್ ವೈದಿಕನ್ ವಲ್ಲಭನ್ ಅಕ್ಕಿತ್ತಿರಿಪಾಡ್ ಉಪಸ್ಥಿತರಿರುವರು. ಉದ್ಯಮಿ ಕುಸುಮೋದರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್, ಗೋವಾ ಸರಕಾರದ ಸಚಿವ ವಿನೋದ್ ದತ್ತಾರಾಮ್ ಪಾಲೇಕರ್, ಗೋವಾದ ಮುಖ್ಯ ಚುನಾವಣಾಧಿಕಾರಿ ನಾರಾಯಣ ಶ್ರೀಕೃಷ್ಣ ನಾವಟಿ, ಹಿಂದು ಹೆಲ್ಪ್ ಲೈನ್ ರಾಷ್ಟ್ರೀಯ ಅಧ್ಯಕ್ಷ ಟಿ.ವಿಜಯಕುಮಾರ್ ರೆಡ್ಡಿ, ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ಜಯಲಕ್ಷ್ಮೀ ಕೆ, ವನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ವರಿ ದೇವಿ, ಕಡಂದಲೆ ಸುರೇಶ್ ಭಂಡಾರಿ, ಜಯರಾಮ ನೆಲ್ಲಿತ್ತಾಯ, ಎಂ.ಜೆ.ಕಿಣಿ, ಅಶೋಕ್ ರೈ, ಎ.ಜೆ.ಶೇಖರ್ ಮೊದಲಾದವರು ಉಪಸ್ಥಿತರಿರುವರು.
  ಸಂಜೆ ಸೂಯರ್ಾಸ್ತಮಾನದಿಂದ ಫೆ.11 ರ ವರೆಗೆ ನಡೆಯಲಿರುವ 15ನೇ ವರ್ಷದ ಅಖಂಡ ಭಜನಾ ಸಪ್ತಾಹಕ್ಕೆ ಮಾಣಿಲ ಶ್ರೀಗಳು ಮತ್ತು ಕೊಂಡೆವೂರು ಶ್ರೀಗಳು ಚಾಲನೆ ನೀಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries