HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸಿಪಿಐ ಜಿಲ್ಲಾ ಸಮ್ಮೇಳನ ಆರಂಭ
      ಕಾಸರಗೋಡು: ಸಿಪಿಐ ಜಿಲ್ಲಾ ಸಮ್ಮೇಳನ ಚಟ್ಟಂಚಾಲ್ನಲ್ಲಿ ಆರಂಭಗೊಂಡಿತು. ಇದರಂಗವಾಗಿ ರೆಡ್ ವಾಲಂಟಿಯರ್ಗಳ ಮೆರವಣಿಗೆ ಮತ್ತು ಬಹಿರಂಗ ಸಭೆ ಫೆ.11 ರಂದು ಸಂಜೆ ಜರಗಿತು. ಪೊಯಿನಾಚಿಯಿಂದ ಹೊರಟ ರೆಡ್ ವಾಲಂಟಿಯರ್ಗಳ ಮೆರವಣಿಗೆ ಸಮ್ಮೇಳನ ನಗರವಾದ ಚಟ್ಟಂಚಾಲ್ಗೆ ತಲುಪಿತು.
    ಸಿಪಿಐ ಜಿಲ್ಲಾ ಸಮ್ಮೇಳನದ ಅಂಗವಾಗಿ ಸ್ವಾಗತ ಸಮಿತಿ ಚೆಯರ್ಮೇನ್ ಟಿ.ಕೃಷ್ಣನ್ ಧ್ವಜಾರೋಹಣಗೈದರು. ಕಮ್ಯೂನಿಸ್ಟ್ ಪಾಟರ್ಿಯ ಪ್ರಮುಖ ಮುಖಂಡರ ಸ್ಮೃತಿ ಮಂಟಪಗಳಿಂದ ಪ್ರಮುಖ ನೇತಾರರು ತಂದ ಧ್ವಜ, ಧ್ವಜಸ್ತಂಭ, ಬ್ಯಾನರ್ಗಳ ಮೆರವಣಿಗೆ ಚಟ್ಟಂಚಾಲ್ 55 ನೇ ಮೈಲಿನಲ್ಲಿ ಸಂಗಮಿಸಿತು.
   ಫೆ.12 ಹಾಗೂ 13 ರಂದು ಪ್ರತಿನಿ ಸಮ್ಮೇಳನವು ಪಾಂಚಜನ್ಯ ಸಭಾಂಗಣದಲ್ಲಿ ನಡೆಯಲಿದ್ದು, ಹಿರಿಯ ಸಿಪಿಐ ನೇತಾರ ಪಿ.ಎನ್.ಆರ್.ಅಮ್ಮಣ್ಣಾಯ ಧ್ವಜಾರೋಹಣಗೈಯ್ಯಲಿದ್ದಾರೆ. ಸಮ್ಮೇಳನವನ್ನು ರಾಷ್ಟ್ರೀಯ ಸಮಿತಿ ಸದಸ್ಯ ಬಿನೋಯ್ ವಿಶ್ವಂ ಉದ್ಘಾಟಿಸುವರು. ಜಿಲ್ಲೆಯ ಆರು ಕ್ಷೇತ್ರಗಳ ಪಕ್ಷ ಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ, ಸಿಪಿಐ ಪಕ್ಷದ 163 ಮಂದಿ ನೇತಾರರು ಭಾಗವಹಿಸಲಿದ್ದಾರೆ. ಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ಹಿರಿಯ ನೇತಾರರ ಸ್ಮರಣೆ, ಪಕ್ಷದ ಮುಂದಿನ ನಡೆ ಸಹಿತ ಜಿಲ್ಲೆಯ ಅಭಿವೃದ್ಧಿಯಲ್ಲಿ ಪಕ್ಷದ ಪಾಲುಗಾರಿಕೆಯ ಬಗ್ಗೆ ಚಿಂಥನ ನಡೆಯಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries