ವಸಂತಕುಮಾರಿ ಕೋಂಗೋಟು - ಸೇವಾನಿವೃತ್ತಿ
ಉಪ್ಪಳ: ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆಯಲ್ಲಿದ್ದ ಶ್ರೀಮತಿ ವಸಂತಕುಮಾರಿ ಕೋಂಗೋಟು ಇವರು ನಿನ್ನೆ ಸೇವಾನಿವೃತ್ತಿ ಹೊಂದಿದರು.
1982 ಜುಲೈನಲ್ಲಿ ವೃತ್ತಿಜೀವನ ಆರಂಭಿಸಿದ ವಸಂತಕುಮಾರಿಯವರು ತಮ್ಮ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಬದಿಯಡ್ಕ, ಮಂಜೇಶ್ವರ, ಉಪ್ಪಳ, ಕುಂಬಳೆಗಳಲ್ಲಿ ವೃತ್ತಿಜೀವನವನ್ನು ಕೈಗೊಂಡಿದ್ದಾರೆ. ನಿವೃತ್ತಿಯಂದು ಉಪ್ಪಳ ಮುಖ್ಯ ಅಂಚೆಕಛೇರಿಯಲ್ಲಿ ಎಂಎಸಿಸಿ3 ಅಧಿಕಾರಿಯಾಗಿ ಸೇವೆಯಲ್ಲಿದ್ದರು.
ವಸಂತಕುಮಾರಿಯವರು ಕುಳ್ಳಂಬೆಟ್ಟು ಮನೆತನದ ದಿ. ನಾರಾಯಣ ಭಟ್, ದಿ.ಸರಸ್ವತಿ ಅಮ್ಮನವರ ಪುತ್ರಿ. ದಿ.ಕೋಂಗೋಟು ಗಣಪತಿ ಭಟ್ ಇವರ ಧರ್ಮಪತ್ನಿ.
ಉಪ್ಪಳ: ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆಯಲ್ಲಿದ್ದ ಶ್ರೀಮತಿ ವಸಂತಕುಮಾರಿ ಕೋಂಗೋಟು ಇವರು ನಿನ್ನೆ ಸೇವಾನಿವೃತ್ತಿ ಹೊಂದಿದರು.
1982 ಜುಲೈನಲ್ಲಿ ವೃತ್ತಿಜೀವನ ಆರಂಭಿಸಿದ ವಸಂತಕುಮಾರಿಯವರು ತಮ್ಮ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಬದಿಯಡ್ಕ, ಮಂಜೇಶ್ವರ, ಉಪ್ಪಳ, ಕುಂಬಳೆಗಳಲ್ಲಿ ವೃತ್ತಿಜೀವನವನ್ನು ಕೈಗೊಂಡಿದ್ದಾರೆ. ನಿವೃತ್ತಿಯಂದು ಉಪ್ಪಳ ಮುಖ್ಯ ಅಂಚೆಕಛೇರಿಯಲ್ಲಿ ಎಂಎಸಿಸಿ3 ಅಧಿಕಾರಿಯಾಗಿ ಸೇವೆಯಲ್ಲಿದ್ದರು.
ವಸಂತಕುಮಾರಿಯವರು ಕುಳ್ಳಂಬೆಟ್ಟು ಮನೆತನದ ದಿ. ನಾರಾಯಣ ಭಟ್, ದಿ.ಸರಸ್ವತಿ ಅಮ್ಮನವರ ಪುತ್ರಿ. ದಿ.ಕೋಂಗೋಟು ಗಣಪತಿ ಭಟ್ ಇವರ ಧರ್ಮಪತ್ನಿ.