HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕುರೆಡ್ಕ-ಕೋಲ್ಲಪದವು ರಸ್ತೆ ಲೋಕಾರ್ಪಣೆ
   ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ  ಕುರೆಡ್ಕ-ಕೋಲ್ಲಪದವು  ವಲ್ಡರ್್ ಬ್ಯಾಂಕ್  ಫಂಡ್ ಉಪಯೋಗಿಸಿ ನಿಮರ್ಿಸಿದ ರಸ್ತೆಯನ್ನು ಕಾಸರಗೋಡು ಸಂಸದ ಪಿ. ಕರುಣಾಕರನ್ ಗುರುವಾರ ಲೋಕಾರ್ಪಣೆಗೊಳಿಸಿದರು.ಬಳಿಕ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ರಸ್ತೆ ಸಹಿತ ಪ್ರಾಥಮಿಕ ಸೌಕರ್ಯಗಳ ಅಭಿವೃದ್ದಿಗೆ ಸರಕಾರ ಸಹಿತ ವಿವಿಧ ವಿಭಾಗಗಳ ನೆರವನ್ನು ಬಳಸಿ ಇನ್ನಷ್ಟು ಕಾರ್ಯಯೋಜನೆ ಮುನ್ನಡೆಸಲು ನಾಗರಿಕರು ಮುಂದೆ ಬರಬೇಕು. ಆಧುನಿಕ ಕಾಳಘಟ್ಟದಲ್ಲಿ ವಾಸಿಸುವವರೆಂದು ತಿಳಿಯಲ್ಪಡುವ ನಾವು ಇನ್ನೂ ಮೂಲ ಸೌಕರ್ಯಗಳಿಂದ ವಂಚಿತರಾಗುವುದು ಸಭ್ಯತೆಯಲ್ಲ ಎಂದು ತಿಳಿಸಿದರು. ಅಗತ್ಯದ ಸೌಕರ್ಯಗಳ ಪೂರೈಕೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದರು.
   ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷ ಪುಟ್ಟಪ್ಪ ಕೆ,ಅಭಿವೃದಿ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಪಂಚಾಯತು ಸದಸ್ಯರಾದ ಹನೀಫ್ ನಡುಬೈಲ್, ಸತೀಶ್ ಕುಲಾಲ್, ಮಲ್ಲಿಕಾ ಬಿ ರೈ, ಮಮತಾ ಯು  ರೈ, ಚಂದ್ರಾವತಿ,ಶಶಿಕಲಾ ವೈ, ಪ್ರೇಮ ಎಂ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತು ಮೇಲ್ವಿಚಾರಕ ಪ್ರದೀಪ್ ಸ್ವಾಗತಿಸಿ, ಕಾರ್ಯದಶರ್ಿ ರೆಜಿಮೋನ್ ವಂದಿಸಿದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries