HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಏರಿಕೆಯಾದ ಉಷ್ಣಾಂಶ-ವ್ಯಾಪಕ ಹಾನಿಯ ಭೀತಿ
   ಕುಂಬಳೆ: ಮಾಚರ್್ ತಿಂಗಳು ಆರಂಭಗೊಳ್ಳುತ್ತಿರುವಂತೆ ಕರಾವಳಿಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಉಷ್ಣಾಂಶದ ಏರಿಕೆ ಕಂಡುಬಂದಿದ್ದು,  ಭೀತಿಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶ ಸಹಿತ ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 8-9 ಗಂಟೆಯಿಂದ ನಿರಂತರ ಪ್ರಮಾಣದ ಬಿಸಿಲಿನ ಧಗೆ ಏರುತ್ತಿರುವುದು ಗುರುವಾರ-ಶುಕ್ರವಾರ ಕಂಡುಬಂದಿದೆ.ಪರಿಣಾಮವಾಗಿ ವಿಪರೀತ ದಾಹ, ಮೈ ತುರಿಕೆಗಳು ಕಂಡುಬರುತ್ತಿದ್ದು, ಜನರು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.
   ಗುರುವಾರ ಮಧ್ಯಾಹ್ನ ಚೆರ್ಕಳದಲ್ಲಿ ನಿಲುಗಡೆಗೊಳಿಸಲಾಗಿದ್ದ ಟಿಪ್ಪರ್ ಲಾರಿಯ ಮುಂಭಾಗದ ಗಾಜು ಬಿಸಿಲಿನ ಆಘಾತದಿಂದ ಹಾನಿಗೊಂಡಿರುವುದು ಕಂಡುಬಂದಿದೆ. ಜೊತೆಗೆ ಕುಂಬಳೆ, ಮೀಯಪದವಿನಲ್ಲೂ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಶುಕ್ರವಾರ ಸೀತಾಂಗೋಳಿಯಲ್ಲೂ ಅಟೋರಿಕ್ಷಾ ವೊಂದರ ಗಾಜು ಹಾನಿಗೊಂಡಿರುವುದು ಕಂಡುಬಂದಿದೆ.
   ಅಂತರ್ಜಲ ಕುಸಿತ:
   ಬಿಸಿಲಿನ ಧಗೆ ಏರಿಕೆಯಾದ ಬೆನ್ನಲ್ಲೇ ಹಲವೆಡೆ ಅಂತರ್ಜಲ ಕುಸಿಯತೊಡಗಿದ್ದು, ಬಾವಿ,ಕೆರೆ, ಕೊಳವೆ ಬಾವಿಗಳ ನೀರಿನ ಮಟ್ಟದಲ್ಲಿ ಗಣನೀಯ ಕುಸಿತವಾಗಿದೆ. ಹೊಳೆ, ನದಿಗಳು ಈಗಾಗಲೇ ಬಹುತೇಕ ಬತ್ತಿದೆ. ಅಡಿಕೆ, ಬಾಳೆ ಕೃಷಿ ಅಗತ್ಯ ನೀರಿನ ಲಭ್ಯತೆಯ ಕೊರತೆಯಿಂದ ನಲುಗುವ ಭೀತಿಯನ್ನು ಕೆಲವೆಡೆ ಕೃಷಿಕರು ವ್ಯಕ್ತಪಡಿಸಿದ್ದಾರೆ.
   ಕುಡಿಯುವ ನೀರಿಗೂ ಕೊರತೆ:
   ಜನವಸತಿನ ಪ್ರದೇಶದಲ್ಲಿ ಕುಡಿಯುವ ನೀರಿನ ಲಭ್ಯತೆಯ ಕೊರತೆ ಕಂಡುಬರತೊಡಗಿದ್ದು, ಸ್ಥಳೀಯಾಡಳಿತಗಳು ನೀರು ವಿತರಿಸುವಲ್ಲಿ ಇನ್ನೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಜನರನ್ನು ರೊಚ್ಚಿಗೆಬ್ಬಿಸತೊಡಗಿದೆ.
   
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries