HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಸ್ವ-ರಕ್ಷಣೆ ತರಬೇತಿ ಶಿಬಿರ
   ಕುಂಬಳೆ: ಜನಮೈತ್ರಿ ಪೋಲೀಸ್ ಕುಂಬಳೆ ಘಟಕದ ನೇತೃತ್ವದಲ್ಲಿ ಕುಂಬಳೆ ಅಕಾಡೆಮಿ ಕಾಲೇಜಿನ ವಿದ್ಯಾಥರ್ಿಗಳಿಗೆ ಸ್ವ-ರಕ್ಷಣಾ ತರಬೇತಿ ಶಿಬಿರ ಇತ್ತೀಚೆಗೆ ಕುಂಬಳೆ ಜನಮೈತ್ರಿ ಸಭಾಂಗಣದಲ್ಲಿ ನಡೆಯಿತು.
  ಶಿಬಿರವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಉದ್ಘಾಟಿಸಿ ಮಾತನಾಡಿ, ವಿದ್ಯಾಥರ್ಿ ಹಂತದ ಜೀವನವು ಭವಿಷ್ಯದ ಬದುಕಿನ ದಾರಿದೀಪವಾಗಿದ್ದು, ಅನಘ್ರ್ಯ ಜ್ಞಾನರಾಶಿಯನ್ನು ಅರಿತುಕೊಳ್ಳುವ ನಿಟ್ಟಿನ ಗರಿಷ್ಠ ಯತ್ನಗಳಾಗಬೇಕು. ಸ್ವ ರಕ್ಷಣೆಯಂತಹ ಜೀವನದ ಉದ್ದಗಲಕ್ಕೂ ಅಗತ್ಯವಿರುವ ಅರಿವನ್ನು ಸಂಪದಿಸಲು ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸುವುದರಿಂದ ಸುಂದೆ ಬದುಕು ನಮ್ಮದಾಗುತ್ತದೆ ಎಂದು ತಿಳಿಸಿದರು.
   ಕುಂಬಳೆ ಠಾಣಾಧಿಕಾರಿ ಜೆ.ಕೆ.ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಕಾಲೇಜು ನಿದರ್ೇಶಕ ಅಬ್ದುಲ್ ಲತೀಫ್, ಪ್ರಾಂಶುಪಾಲ ಮುನೀರ್, ಪೋಲೀಸಧಿಕಾರಿ ವಿಜಯನ್ ಮೇಲತ್ತ್, ಶಿಕ್ಷಕರಾದ ಕೊಪ್ಪಳ ಚಂದ್ರಶೇಖರನ್, ನಫೀಸಾ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಮಹಿಳಾ ಪೋಲೀಸ್ ಅಧಿಕಾರಿಗಳಿಂದ ವಿದ್ಯಾಥರ್ಿಗಳಿಗೆ ಬಳಿಕ ವಿವಿಧ ಸ್ವ ರಕ್ಷಣಾ ತರಬೇತಿ ನಡೆಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries