HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ವಿದಾಯಕೂಟ
     ಕುಂಬಳೆ: ಕಠಿಣ ಪರಿಸ್ಥಿತಿಯ ನಡುವೆಯೂ ಸ್ವಪ್ರಯತ್ನದಿಂದ ಮೇಲೇರಿ ಸಾಧನೆಮಾಡಿ ತಮ್ಮ ಗುಣವಂತಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾದ ನಾರಾಯಣ ರಾವ್ ಅವರ ಸೇವೆ ಶ್ಲಾಘನೀಯವಾದುದು ಎಂದು ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ. ಗೋಪಾಲಕೃಷ್ಣ ಭಟ್ ಅವರು ಹೇಳಿದರು.
   ಅವರು ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ  ನಾರಾಯಣ ರಾವ್ ಅವರಿಗೆ ಹೈಯರ್ ಸೆಕೆಂಡರಿ ಕನ್ನಡ ಅಧ್ಯಾಪಕ ಬಳಗದ ವತಿಯಿಂದ ಸೋಮವಾರ ನಡೆದ ವಿದಾಯಕೂಟ ಹಾಗೂ ಅಭಿನಂದನೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
   ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಚಂದ್ರಹಾಸ. ಪಿ. ವಹಿಸಿದ್ದರು. ಡಾ.ಬೇ. ಸಿ. ಗೋಪಾಲಕೃಷ್ಣ ಭಟ್ ಅವರು ನಾರಾಯಣ ರಾವ್ ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಅನಿಲ್ ಕುಮಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ  ಉದಯ ಕುಮಾರಿ ಶುಭಾಶಂಸನೆಗೈದರು.
   ಧರ್ಮತಡ್ಕ ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ಅಧ್ಯಾಪಕರಾದ ಹರೀಶ ಎನ್., ಪ್ರಕಾಶ ಎನ್, ಶ್ರೀನಿವಾಸ ಬಳ್ಳುಳ್ಳಾಯ, ಸತೀಶ್ ಕುಮಾರ್, ದಿನೇಶ, ಅಧ್ಯಾಪಿಕೆಯರಾದ ಪುಷ್ಪಲತ, ಬೇಬಿ, ಲತ, ಭಾರತಿ ಮೊದಲಾದವರು ಮಾತನಾಡಿ ನಾರಾಯಣ ರಾವ್ ಅವರ ಕುರಿತಾದ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಅವರ ಭಾವೀ ಜೀವನಕ್ಕೆ ಶುಭಹಾರೈಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಾರಾಯಣ ರಾವ್ ಅವರು ತಾವು ಜೀವನದಲ್ಲಿ ನಡೆದುಬಂದ ದಾರಿ, ವೃತ್ತಿಜೀವನದಲ್ಲಿ ಎದುರಾದ ಸಂದರ್ಭಗಳನ್ನು ನೆನಪಿಸಿ ತಮಗೆ ಬೆಂಬಲವಾಗಿ ನಿಂತ ಎಲ್ಲರನ್ನೂ ಸ್ಮರಿಸಿ ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
  ಪುಷ್ಪಲತ ಪ್ರಾರ್ಥನೆಯನ್ನು ಹಾಡಿದರು. ರವಿಕುಮಾರ್ ಸ್ವಾಗತಿಸಿ, ಬೇಬಿ ವಂದಿಸಿದರು. ಹರೀಶ ಎನ್. ಕಾರ್ಯಕ್ರಮ ನಿರೂಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries